<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-175618676507441256</id><updated>2011-08-10T04:03:36.511-07:00</updated><title type='text'>ಮಾವಿನಸರ</title><subtitle type='html'>ನಾನು ಕಾಡಿನ ಹುಡುಗ...</subtitle><link rel='http://schemas.google.com/g/2005#feed' type='application/atom+xml' href='http://mavinasara.blogspot.com/feeds/posts/default'/><link rel='self' type='application/atom+xml' href='http://www.blogger.com/feeds/175618676507441256/posts/default?max-results=100'/><link rel='alternate' type='text/html' href='http://mavinasara.blogspot.com/'/><link rel='hub' href='http://pubsubhubbub.appspot.com/'/><author><name>ಪ್ರವೀಣ್ ಮಾವಿನಸರ</name><uri>http://www.blogger.com/profile/13251939120641934507</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><generator version='7.00' uri='http://www.blogger.com'>Blogger</generator><openSearch:totalResults>11</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-175618676507441256.post-4710315866051162970</id><published>2008-04-17T03:37:00.000-07:00</published><updated>2008-04-17T03:43:04.789-07:00</updated><title type='text'>ಐ ಲವ್ ಯೂ ಎನ್ನದವಳು!</title><content type='html'>ಎದುರು ಮನೆಯವಳಾದರೂ&lt;br /&gt;ನನಗಿಂತ ಎರಡು ಕ್ಲಾಸ್ ದೊಡ್ಡವಳು.&lt;br /&gt;ಒಂದೇ ಸ್ಕೂಲ್‌ಗೆ ಹೋದರೂ&lt;br /&gt;ಮರದ ಕೆಳಗೆ ಮಿಕಿ, ಮಿಕಿ ಮಾತನಾಡಿದವರಲ್ಲ.&lt;br /&gt;ಮಸರೂರು ಮಾರಿ ಜಾತ್ರೆ, ಗಣಪತಿ ಫಂಕ್ಷನ್‌ಗೆ ಹೋದರೂ&lt;br /&gt;ಬಳೆ, ಟೇಪು, ಮಂಡಕ್ಕಿ ಕೇಳಿದವಳಲ್ಲ.&lt;br /&gt;ಹಿಂದೆ ಮುಂದೆ, ಮುಂದೆ ಹಿಂದೆ ಹೋದರೂ&lt;br /&gt;ಐ ಲವ್ ಯೂ ಎನ್ನದವಳು.&lt;br /&gt;ಬರ್ತಡೇಯಂದು ಸಿಹಿ ಕೊಡಲು ಹೋದರೆ&lt;br /&gt;ನನ್ನನ್ನೇ ಮದುವೆಯಾಗು ಎಂದು ಗಂಟು ಬಿದ್ದಳು.&lt;br /&gt;&lt;br /&gt;&lt;br /&gt;ಬದುಕಿನ ಜಂಜಡ, ಶಿವಮೊಗ್ಗದಿಂದ ಬೆಂಗಳೂರಿಗೆ ವೃತ್ತಿ ಜೀವನದ ಬದಲಾವಣೆ, ಮಹಾನಗರಿಗೆ ಹೊಂದಿಕೊಳ್ಳಬೇಕಾದ ದರ್ದು. ಇವುಗಳೆಲ್ಲವ ಮಧ್ಯೆ ಕೆಲ ದಿನ ಕಾಲಿಯಾಗಿದ್ದೆ. ಇನ್ನಾದರೂ ತುಂಬಿಸುವ ಕೆಲಸ ಮಾಡುತ್ತೇನೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/175618676507441256-4710315866051162970?l=mavinasara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://mavinasara.blogspot.com/feeds/4710315866051162970/comments/default' title='Post Comments'/><link rel='replies' type='text/html' href='http://www.blogger.com/comment.g?blogID=175618676507441256&amp;postID=4710315866051162970' title='5 Comments'/><link rel='edit' type='application/atom+xml' href='http://www.blogger.com/feeds/175618676507441256/posts/default/4710315866051162970'/><link rel='self' type='application/atom+xml' href='http://www.blogger.com/feeds/175618676507441256/posts/default/4710315866051162970'/><link rel='alternate' type='text/html' href='http://mavinasara.blogspot.com/2008/04/blog-post.html' title='ಐ ಲವ್ ಯೂ ಎನ್ನದವಳು!'/><author><name>ಪ್ರವೀಣ್ ಮಾವಿನಸರ</name><uri>http://www.blogger.com/profile/13251939120641934507</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>5</thr:total></entry><entry><id>tag:blogger.com,1999:blog-175618676507441256.post-958203083892940664</id><published>2007-09-09T23:57:00.000-07:00</published><updated>2008-12-09T17:42:57.419-08:00</updated><title type='text'>ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಗುಂಡಿನ ಕಾರುಬಾರು...</title><content type='html'>&lt;a href="http://2.bp.blogspot.com/_EGz7kNqH9cg/RuTxITdu5wI/AAAAAAAAADc/Tr0wSJidppI/s1600-h/DEER1.JPG"&gt;&lt;img id="BLOGGER_PHOTO_ID_5108473002311214850" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://2.bp.blogspot.com/_EGz7kNqH9cg/RuTxITdu5wI/AAAAAAAAADc/Tr0wSJidppI/s320/DEER1.JPG" border="0" /&gt;&lt;/a&gt;ಶೆಟ್ಟಿಹಳ್ಳಿ ಅಭಯಾರಣ್ಯ ಶಿವಮೊಗ್ಗ ಜಿಲ್ಲೆಯ ಸುಮಾರು ೩೯೫ ಚದರ ಕಿಲೋ ಮೀಟರ್ ಪ್ರದೇಶದಲ್ಲಿ ಹರಡಿಕೊಂಡಿರುವ ಪ್ರದೇಶ. ಇಲ್ಲಿ ಜಿಂಕೆ, ಕಡವೆಗಳು ಯಥೇಚ್ಛವಾಗಿ ಕಂಡು ಬರುತ್ತವೆ.&lt;br /&gt;ಸೂಕ್ಷ್ಮಗ್ರಹಿಗಳಲ್ಲದ ಜಿಂಕೆಗಳು ಮತ್ತು ಕಡವೆಗಳು ಬಂದೂಕಿನ ಗುಂಡಿಗೆ ಇಲ್ಲಿ ದಿನನಿತ್ಯ ಸುಲಭವಾಗಿ ಬಲಿಯಾಗುತ್ತಿವೆ. ಹಗಲೆಲ್ಲಾ ಹೊಲ, ಗದ್ದೆಗಳಲ್ಲಿ ದುಡಿಯುವ ಇಲ್ಲಿನ ಜನರು ರಾತ್ರಿಯಾದ ಕೂಡಲೇ ಬಂದೂಕನ್ನು ಕೈಗೆತ್ತಿ ಕೊಳ್ಳುತ್ತಾರೆ. ಸೂರ್ಯ ದಿಗಂತದಲ್ಲಿ ಮೂಡುವವರೆಗೆ ತಮ್ಮ ಬೇಟೆಯನ್ನು ಮುಂದುವರಿಸಿರುತ್ತಾರೆ. ಇದು ಇಲ್ಲಿಯ ಜನರಿಗೆ ಪ್ರವೃತ್ತಿಯಾಗಿ ಪರಿಣಮಿಸಿದೆ.&lt;br /&gt;ಪ್ರತಿ ಮನೆ ಮನೆಯಲ್ಲಿಯೂ ಅಕ್ರಮ ಬಂದೂಕುಗಳಿಗಿದ್ದು, ಇವಕ್ಕೆ ಅಡುಗೆ ಮನೆಯೇ ಕಾರಸ್ಥಾನ. ಪ್ರತಿ ಮನೆಯ ಓಲೆ ಮೇಲೆ ಬಂದೂಕುಗಳನ್ನು ನೇತು ಹಾಕಲಾಗಿರುತ್ತದೆ. ಈ ಪ್ರದೇಶದ ಜನರು ಮಾಂಸದ ಅಡುಗೆ ಪಾತ್ರೆಗಳನ್ನು ತೊಳೆಯುವುದೇ ಇಲ್ಲ ಎಂದು ಹೊರಗಿನವರು ಆಡಿಕೊಳ್ಳುತ್ತಾರೆ.&lt;br /&gt;ಮಂಡಗದ್ದೆ, ಗಾಜನೂರು, ಸಿರಿಗೆರೆ, ಆಯನೂರು, ಅರಸಾಳುಗಳಲ್ಲಿ ವಲಯ ಅರಣ್ಯಾಧಿಕಾರಿಗಳ ಕಚೇರಿ ಇದ್ದರು ಸಹ ಬೇಟೆಯ ಮೇಲೆ ಯಾವುದೇ ಪರಿಣಾಮವಾಗಿಲ್ಲ.&lt;br /&gt;ಬೇಸಿಗೆ ಕಾಲದಲ್ಲಿ ಜಿಂಕೆಗಳು ಹೆಚ್ಚು ಬಲಿ ಬೀಳುತ್ತವೆ. ಕಾಡಿನಲ್ಲಿ ನೀರಿನ ಅಭಾವ ಪರಿಸ್ಥಿತಿ ತಲೆದೊರುವುದರಿಂದ, ಕಾಡಿಗೆ ಬೆಂಕಿ ಹಾಕುವುದರಿಂದ ಪ್ರಾಣಿಗಳು ಮನೆಗಳ ಬಾಗಿಲಿಗೆ ಬರುತ್ತವೆ. ಮನೆಯ ಪಕ್ಕದ ಕೆರೆಗೋ ಅಥವಾ ಮನೆಯ ಹಿಂದಿರುವ ನೀರಿನ ಪಾತ್ರೆಗೋ ಬಂದು ಜಿಂಕೆಗಳು ನೀರು ಕುಡಿಯುವುದು ಇಲ್ಲಿ ಸಾಮಾನ್ಯ.&lt;br /&gt;ಇಲ್ಲಿ ಹಬ್ಬ, ಹರಿದಿನ, ಮದುವೆ- ಮುಂಜಿ ಮುಂತಾದ ಕಾರ್ಯಕ್ರಮಗಳಿಗೆ ಜಿಂಕೆ ಅಥವಾ ಕಡವೆಯ ಬಾಡೂಟ ಖಂಡಿತ. ಈ ಕಾರ್ಯಕ್ರಮಗಳ ಹಿಂದಿನ ರಾತ್ರಿ ತಂಡವೊಂದು ಜಿಂಕೆಗಳನ್ನು ಬೇಟೆಯಾಡುತ್ತದೆ.&lt;br /&gt;ಜಿಂಕೆಗಳನ್ನು ಬೇಟೆಯಾಡಲು ತೆರಳಿದಾಗ ತಮ್ಮ ನಾಯಿಗೆ ಅಥವಾ ಹಿಂಬಾಲಕರಿಗೆ ಗುಂಡಿನ ಏಟು ತಗುಲಿ ಮೃತಪಟ್ಟ ಘಟನೆಗಳು ನಡೆಯುತ್ತಲೇ ಇರುತ್ತವೆ. ನಾಯಿಗಳ ಸಾವಿಗಂತು ಬೆಲೆಯೇ ಇಲ್ಲ ಎಂಬಂತಾಗಿದೆ ಇಲ್ಲಿ.&lt;br /&gt;ಇದು ಅಭಯಾರಣ್ಯವಾದರೂ ಎಲ್ಲೆಂದರಲ್ಲಿ ಮನೆಗಳು ಕಂಡು ಬರುತ್ತವೆ. ಇಲ್ಲೆಲ್ಲಾ ಒತ್ತುವರಿ ನಡದೇ ಇದೆ. ಈ ಪ್ರದೇಶದಲ್ಲಿರುವ ಎಲ್ಲಾ ಮನೆಗಳಿಗೆ ವಿದ್ಯುತ್ ಹಾಗೂ ದೂರವಾಣಿ ಸಂಪರ್ಕ ಇದೆ ಎಂಬುದು ವಿಶೇಷ ಸಂಗತಿ.&lt;br /&gt;ಈ ಪ್ರದೇಶದಲ್ಲಿರುವ ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಬೈಬ್ಯಾಕ್ ಯೋಜನೆ ತರಲು ಅರಣ್ಯ ಇಲಾಖೆ ಯೋಚಿಸಿದಾಗ ಜನತೆ ಭಾರೀ ಪ್ರಮಾಣದಲ್ಲಿ ವಿರೋಧ ವ್ಯಕ್ತಪಡಿಸಿದರು.&lt;br /&gt;ಈ ಪ್ರದೇಶದ ಸ್ವಚ್ಛಂದ ಹಾರಾಟಕ್ಕೆ ಅಡ್ಡಿಯಾಗುತ್ತಿರುವ ಒಂದೇ ಒಂದು ಕಾಡಾನೆ ಎತ್ತಂಗಡಿಗೆ ಈಗ ಹೋರಾಟ ನಡೆಸಲಾಗುತ್ತಿದೆ.&lt;br /&gt;ಒಟ್ಟಿನಲ್ಲಿ ಈ ಅಭಯಾರಣ್ಯದ ವ್ಯಾಪ್ತಿಯಿಂದ ಜಿಂಕೆಗಳು ಮತ್ತು ಕಡೆವೆಗಳು ಕಣ್ಮರೆಯಾಗುವ ಮೊದಲೆ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು, ಅಕ್ರಮ ಬಂದೂಕುಗಳಿಗೆ ಕಡಿವಾಣ ಹಾಕಿ ಸಂರಕ್ಷಣೆಗೆ ಮುಂದಾಗುವುದು ಅಗತ್ಯ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/175618676507441256-958203083892940664?l=mavinasara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://mavinasara.blogspot.com/feeds/958203083892940664/comments/default' title='Post Comments'/><link rel='replies' type='text/html' href='http://www.blogger.com/comment.g?blogID=175618676507441256&amp;postID=958203083892940664' title='2 Comments'/><link rel='edit' type='application/atom+xml' href='http://www.blogger.com/feeds/175618676507441256/posts/default/958203083892940664'/><link rel='self' type='application/atom+xml' href='http://www.blogger.com/feeds/175618676507441256/posts/default/958203083892940664'/><link rel='alternate' type='text/html' href='http://mavinasara.blogspot.com/2007/09/blog-post.html' title='ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಗುಂಡಿನ ಕಾರುಬಾರು...'/><author><name>ಪ್ರವೀಣ್ ಮಾವಿನಸರ</name><uri>http://www.blogger.com/profile/13251939120641934507</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_EGz7kNqH9cg/RuTxITdu5wI/AAAAAAAAADc/Tr0wSJidppI/s72-c/DEER1.JPG' height='72' width='72'/><thr:total>2</thr:total></entry><entry><id>tag:blogger.com,1999:blog-175618676507441256.post-7902482126331988207</id><published>2007-08-11T01:05:00.000-07:00</published><updated>2010-11-13T01:35:50.934-08:00</updated><title type='text'>ವಾಹ್ಹ್ ಲಿಂಗಮನಕ್ಕಿ ಮತ್ತು ಭದ್ರತೆ</title><content type='html'>&lt;a href="http://4.bp.blogspot.com/_EGz7kNqH9cg/RsC93GZNLLI/AAAAAAAAAC4/Y-BjjdanI_g/s1600-h/PP.JPG"&gt;&lt;/a&gt;&lt;br /&gt;ವೇಣು ಸಾರ್, ರಾಜೇಶ್‌ನಾಯ್ಕರು ಈಗಾಗಲೇ ಜೋಗ, ಅಲ್ಲಿನ ವಿವಿಧ ಮಜಲುಗಳ ಬಗ್ಗೆ ಬರೆದಿದ್ದಾರೆ. ಆದರೂ ನಾನೊಮ್ಮೆ ಅದೇ ಜೋಗದ ಬಗ್ಗೆ ಬರೆಯುತ್ತಿದ್ದೇನೆ. ಅವತ್ತು (ಆ.೭) ನಾವು ಜೋಗಕ್ಕೆ ಹೋಗಬೇಕು ಎಂದು ನಿರ್ಧರಿಸಿದ್ದೇ ರಾತ್ರಿ ೧೦.೩೦ಕ್ಕೆ. ಕೆಲಸ ಮುಗಿಸಿ ಮನೆ ಸೇರಬೇಕಾದರೆ ಬೆಳಗಿನಜಾವ ಮೂರು ಗಂಟೆ. ಪೂರ್ವ ನಿರ್ಧಾರದಂತೆ ಸಹದ್ಯೋಗಿಗಳ ಒಂದು ತಂಡ ಬೆಳಗ್ಗೆ ೬.೩೦ಕ್ಕೆ ಶಿವಮೊಗ್ಗದಿಂದ ಜೋಗಕ್ಕೆ ಹೊರಟರೆ, ಮಕ್ಕಳು, ಮಹಿಳೆಯರಿದ್ದ ನಾವು ಹೊರಟಿದ್ದು ೮.೩೦ಕ್ಕೆ. ಜೋಗಕ್ಕೆ ಹೋಗುವ ದಾರಿಯಲ್ಲಿ ರಾತ್ರಿಯಿಡಿ ನಾವು ಮಾಡಿದ ಸುದ್ದಿಯ ಅಶ್ಲೇಷಾ ಮಳೆ ಮಾಡಿದ ಅನಾಹುತದ ಚಿತ್ರಣ ಕಣ್ಣಿಗೆ ಕಟ್ಟಿದಂತಿತ್ತು. ರಸ್ತೆಗಳು, ಸೇತುವೆ, ಮೋರಿಗಳ ಮೇಲೆ ನೀರು ಹರಿಯುತ್ತಿತ್ತು. ಭತ್ತದ ಗದ್ದೆಗಳು ಸಮುದ್ರದಂತೆ ಕಾಣುತ್ತಿದ್ದವು.&lt;br /&gt;&lt;br /&gt;&lt;a href="http://2.bp.blogspot.com/_EGz7kNqH9cg/RsC9ZmZNLKI/AAAAAAAAACw/3yAJL5Vx0lw/s1600-h/PP2.JPG"&gt;&lt;img style="TEXT-ALIGN: center; MARGIN: 0px auto 10px; DISPLAY: block; CURSOR: hand" id="BLOGGER_PHOTO_ID_5098283025684049058" border="0" alt="" src="http://2.bp.blogspot.com/_EGz7kNqH9cg/RsC9ZmZNLKI/AAAAAAAAACw/3yAJL5Vx0lw/s320/PP2.JPG" /&gt;&lt;/a&gt; ನಾವು ಜೋಗವನ್ನು ತಲುಪುದರೊಳಗೆ ಮುಂದೆ ಹೋದ ಗೆಳೆಯರು ಕೆಪಿಸಿ ಮುಖ್ಯಕಚೇರಿ ಬಳಿ ನಮಗಾಗಿ ಲಿಂಗಮನಕ್ಕಿ ನೋಡ ಹೋಗಲು ಕಾಯುತ್ತಿದ್ದರು. ನಾವು ಹೋಗುತ್ತಿದ್ದಂತೆ ವಾಹನ ಸಂಖ್ಯೆ, ನಮ್ಮ ವಿವರ ಎಲ್ಲ ಬರೆದು ಅಧಿಕಾರಿಗಳಿಗೆ ಕೊಟ್ಟು ಪಾಸ್ ಪಡೆದುಕೊಳ್ಳಲಾಯಿತು. ನಮ್ಮಗೆ ಸಂಬಂಧಿಸಿದ ಅಧಿಕಾರಿ ಅಲ್ಲೊಬ್ಬರು ಇರುವುದರಿಂದ ಲಿಂಗನಮಕ್ಕಿ ಅಣೆಕಟ್ಟಿಗೆ ಹೋಗಲು ಪಾಸ್ ಪಡೆದುಕೊಳ್ಳಲು ಹೆಚ್ಚು ಸಮಸ್ಯೆ ಆಗಲಿಲ್ಲ. ಆದರೂ ಮಕ್ಕಳಿಗೆ ಬಿಡುವುದಿಲ್ಲ ಎಂಬ ಕಂಡಿಷನ್ ಹಾಕಲಾಯಿತು. ಈಗ ಲಿಂಗನಮಕ್ಕಿ ಅಣೆಕಟ್ಟಿಗೆ ಉಗ್ರರು, ನಕ್ಸಲರು ಬೆದರಿಕೆ ಇರುವುದರಿಂದ ಅಲ್ಲಿ ಯಾರಿಗೂ ಬಿಡುವುದಿಲ್ಲ. ಕೆಪಿಸಿ ಅಧಿಕಾರಿಗಳಿಗೂ ಸಹ. ನಕ್ಸಲ್ ಪೀಡಿತ ಪ್ರದೇಶ ಎಂದು ಘೋಷಿಸಿರುವ ನಾಗವಳ್ಳಿ ಪಕ್ಕದಲ್ಲಿಯೇ ಇರುವುದರಿಂದ ಕಟ್ಟುನಿಟ್ಟಿನ ಭದ್ರತೆ ಅಲ್ಲಿದೆ. ಇತ್ತೀಚೆಗಷ್ಟೆ ತರಬೇತಿ ವಿದ್ಯಾರ್ಥಿಗಳಿಗೂ ಸಹ ಅಣೆಕಟ್ಟು ಪ್ರದೇಶ ಪ್ರವೇಶ ನಿಷೇಧಿಸಲಾಗಿದೆ. ಅಲ್ಲಿನ ಅಂತರಿಕ ಅಧಿಕಾರಿಗಳು ಅಣೆಕಟ್ಟು ಪ್ರದೇಶಕ್ಕೆ ಪ್ರವೇಶ ಪಾಸ್ ಪಡೆದವರ ಚಲನವಲನಗಳನ್ನು ಗಮನಿಸುತ್ತಿರುತ್ತಾರೆ. ನಮ್ಮೊಂದಿಗೆ ಅಧಿಕಾರಿಯೊಬ್ಬರು ಅಲ್ಲಿನ ಮಾಹಿತಿ ನೀಡಲು ಬಂದಿದ್ದರು. ಮುಖ್ಯಗೇಟ್ ಬಳಿ ಹೋಗುತ್ತಿದ್ದಂತೆಯೇ ಭದ್ರತೆಯವರು ಕೈ ಮಾಡಿ ಹಿಂದೆ ಹೋಗುವಂತೆ ಸೂಚಿಸಿದರು. ನಮ್ಮ ಜೊತೆ ಇದ್ದ ಅಧಿಕಾರಿ ತನಿಖಾ ಠಾಣೆಗೆ ಹೋಗಿ ಅಲ್ಲಿನವರಿಗೆ ಮನವರಿಕೆ ಮಾಡಿಕೊಟ್ಟು ಅಂತೂ ಮೊದಲ ಹಂತದಲ್ಲಿ ಪ್ರವೇಶ ಪಡೆದವು. ನಂತರ ಹಂತ ಹಂತಕ್ಕೂ ತಪಾಸಣೆ ನಮಗೆ ಎದುರಾಯಿತು. ಪ್ರತಿ ಬಾರಿಯೂ ಅಲ್ಲಿನ ಅಧಿಕಾರಿಗಳಿಗೆ ನಮ್ಮ ಬಗ್ಗೆ ಮನವರಿಗೆ ಮಾಡಿಕೊಡುವುದು ನಮ್ಮ ಜತೆ ಬಂದ ಕೆಪಿಸಿ ಅಧಿಕಾರಿಗೆ ಸಾಕುಬೇಕಾಯಿತು. ಅಂತೂ ಲಿಂಗನಮಕ್ಕಿ ಅಣೆಕಟ್ಟೆ ಮೇಲೆ ನಿಂತಾಗ ಎಲ್ಲರಿಗೂ ಪರಮಾನಂದ. ನಮ್ಮ ಜೀವನ ಸಾರ್ಥಕವಾಯಿತು ಎಂಬ ಖುಷಿ. ಆ.೮ ಬುಧವಾರ ಅಣೆಕಟ್ಟೆಯಲ್ಲಿರುವ ೧೧ ಗೇಟ್‌ಗಳನ್ನು ತೆಗೆದು ಸುಮಾರು ೧ ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿತ್ತು. ನಮ್ಮ ತಮಿಳುನಾಡು, ಆಂಧ್ರಪ್ರದೇಶದ ಸಹದ್ಯೋಗಿಗಳ ಖುಷಿಗಂತೂ ಪಾರವೇ ಇರಲಿಲ್ಲ. ಅಣೆಕಟ್ಟೆಯ ಕೆಳಗೆ ಬಂದಾಗಲಂತೂ ಎಂದೂ ನೋಡಲು ಸಾಧ್ಯವಾಗದ ದೃಶ್ಯ ಎಲ್ಲರ ಮನಸೂರೆಗೊಂಡಿತು. ನಾನು ನೂರಾರು ಸಾರಿ ಜೋಗಕ್ಕೆ ಬಂದಿದ್ದೇನೆ. ಈಗ ನನ್ನ ಜನ್ಮ ಸಾರ್ಥಕವಾಯಿತು ಎಂದು ನಮ್ಮ ಡ್ರೈವರ್ ಸಂದೇಶ್ ಹೇಳಿದ್ದರಲ್ಲಿ ಸತ್ಯವಿತ್ತು.&lt;br /&gt;&lt;br /&gt;&lt;div&gt;&lt;a href="http://2.bp.blogspot.com/_EGz7kNqH9cg/RsC7VmZNLJI/AAAAAAAAACo/KCqY7Nl4Au0/s1600-h/PP1.JPG"&gt;&lt;img style="TEXT-ALIGN: center; MARGIN: 0px auto 10px; DISPLAY: block; CURSOR: hand" id="BLOGGER_PHOTO_ID_5098280757941316754" border="0" alt="" src="http://2.bp.blogspot.com/_EGz7kNqH9cg/RsC7VmZNLJI/AAAAAAAAACo/KCqY7Nl4Au0/s320/PP1.JPG" /&gt;&lt;/a&gt; ಅಣೆಕಟ್ಟೆಯಿಂದ ಹಾಲ್ನೊರೆಯಂತೆ ಅಳಾಳೆತ್ತರಕ್ಕೆ ಧುಮುಕುತ್ತಿದ್ದ ಶರಾವತಿಯಲ್ಲಿ ಎಲ್ಲರೂ ಮಿಂದು ಹೋದರು. ಜತೆಗೆ ಮಳೆ ಸುರಿಯುತ್ತಿದ್ದರೂ ಯಾರಿಗೂ ಲೆಕ್ಕವಿರಲಿಲ್ಲ. ಆ ನಂತರ ವಿದ್ಯುದಾಗಾರಕ್ಕೆ ಹೋಗಬೇಕು ಎಂಬ ನಮ್ಮ ಆಸೆ ಸ್ವಲ್ಪ ಸಮಸ್ಯೆ ಇದ್ದ ಕಾರಣ ಕೈಗೂಡಲಿಲ್ಲ. ಪಾಸ್‌ನಲ್ಲಿ ಮಾತ್ರ ಅಲ್ಲಿಗೆ ಹೋಗಲು ಅವಕಾಶವಿತ್ತು. ನಂತರ ಚೈನಾ ಬ್ರಿಡ್ಜ್‌ಗೆ ಹೋದಾಗ ಅಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿತ್ತು. ಅಲ್ಲಿಯೂ ಕುಣಿದು, ಮನಸಾರೆ ಖುಷಿಪಟ್ಟೆವೂ. ನಂತರ ಜೋಗಕ್ಕೆ ಬಂದಾಗ ಅಲ್ಲಿ ರಾಜ, ರಾಣಿ, ರೋರರ್, ರಾಕೆಟ್ ಯಾರೂ ಇರಲಿಲ್ಲ. ಎಲ್ಲರೂ ಒಂದಾಗಿದ್ದರು. ಫಾಲ್ಸ್ ಐಬಿಯಲ್ಲಿ ಮೊದಲ ತಂಡಕ್ಕೆ ಊಟ ಸಿಕ್ಕಿತು. ನಾವು ಸಾಗರದಲ್ಲಿ ಬಂದು ಊಟ ಮಾಡಿ ಶಿವಮೊಗ್ಗಕ್ಕೆ ಬಂದಾಗ ಸಂಜೆ ೪.೩೦. ಮತ್ತೆ ಎಂದಿನಂತೆ ರಾತ್ರಿ ಕೆಲಸಕ್ಕೆ. &lt;/div&gt;&lt;div&gt;&lt;strong&gt;&lt;span style="color:#663366;"&gt;ಮೊದಲ ಚಿತ್ರ: ಸುಜಾತ ಮತ್ತು ಚುಕ್ಕಿ.&lt;/span&gt;&lt;/strong&gt;&lt;/div&gt;&lt;div&gt;&lt;strong&gt;&lt;span style="color:#663366;"&gt;ಎರಡನೇ ಚಿತ್ರ: ಚೈನಾ ಗೇಟ್‌ನಲ್ಲಿ ಸಹದ್ಯೋಗಿಗಳು. &lt;/span&gt;&lt;/strong&gt;&lt;/div&gt;&lt;div&gt;&lt;strong&gt;&lt;span style="color:#663366;"&gt;ಮೂರನೇ ಚಿತ್ರ: ಹೊನ್ನಾಳಿ ಚಂದ್ರಶೇಖರ್, ಅವರ ಪತ್ನಿ, ಸೂರ್ಯ, ಚುಕ್ಕಿ, ಸಂದೇಶ್, ಭೂಮಿಕಾ. &lt;/span&gt;&lt;/strong&gt;&lt;/div&gt;&lt;div&gt;&lt;strong&gt;&lt;span style="color:#663366;"&gt;ಚಿತ್ರಕೊಟ್ಟಿದ್ದು: ಎಂ. ರಾಘವೇಂದ್ರ. &lt;/span&gt;&lt;/strong&gt;&lt;a href="http://www.raaghava-haagesummane.blogspot.com/"&gt;&lt;strong&gt;&lt;span style="color:#663366;"&gt;www.raaghava-haagesummane.blogspot.com&lt;/span&gt;&lt;/strong&gt;&lt;/a&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/175618676507441256-7902482126331988207?l=mavinasara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://mavinasara.blogspot.com/feeds/7902482126331988207/comments/default' title='Post Comments'/><link rel='replies' type='text/html' href='http://www.blogger.com/comment.g?blogID=175618676507441256&amp;postID=7902482126331988207' title='4 Comments'/><link rel='edit' type='application/atom+xml' href='http://www.blogger.com/feeds/175618676507441256/posts/default/7902482126331988207'/><link rel='self' type='application/atom+xml' href='http://www.blogger.com/feeds/175618676507441256/posts/default/7902482126331988207'/><link rel='alternate' type='text/html' href='http://mavinasara.blogspot.com/2007/08/blog-post_11.html' title='ವಾಹ್ಹ್ ಲಿಂಗಮನಕ್ಕಿ ಮತ್ತು ಭದ್ರತೆ'/><author><name>ಪ್ರವೀಣ್ ಮಾವಿನಸರ</name><uri>http://www.blogger.com/profile/13251939120641934507</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_EGz7kNqH9cg/RsC9ZmZNLKI/AAAAAAAAACw/3yAJL5Vx0lw/s72-c/PP2.JPG' height='72' width='72'/><thr:total>4</thr:total></entry><entry><id>tag:blogger.com,1999:blog-175618676507441256.post-5230982886458153753</id><published>2007-08-04T00:17:00.000-07:00</published><updated>2007-08-04T00:42:17.885-07:00</updated><title type='text'>ಸಿಟಿ ಬಸ್ ಮತ್ತು ಕಾಮನ್‌ಸೆನ್ಸ್...</title><content type='html'>ನಮ್ಮವರಿಗೆ ಕಾಮನ್‌ಸೆನ್ಸ್ ಇಲ್ಲಾರಿ... ಇದು ಆಗಾಗ ನಮಗೆ ಎದುರಾಗುವ ಮಾತು.&lt;br /&gt;ಇದು ಬಹಳಷ್ಟು ಸಾರಿ ಸತ್ಯ ಎನಿಸುವುದು ಸಿಟಿ ಬಸ್‌ಗಳಲ್ಲಿ. ಅದು ಖಾಸಗಿ ಸಿಟಿ ಬಸ್‌ಗಳಲ್ಲಿ. ಅದ್ಯಾಕೋ ನಮ್ಮವರು ಈ ಸಿಟಿ ಬಸ್ ಕಂಡೊಡನೆ ಕಾಮನ್‌ಸೆನ್ಸ್ ಮರೆತು ಬಿಡುತ್ತಾರೆ.&lt;br /&gt;ಬೆಂಗಳೂರಿನಂತಹ ಮಹಾನಗರದಲ್ಲಿ ಬಿಎಂಟಿಸಿ ಬಸ್ ಹಾವಳಿಯಾದರೆ ನಮ್ಮ ಶಿವಮೊಗ್ಗದಂತಹ ಕೇಂದ್ರಗಳಲ್ಲಿ ಖಾಸಗಿ ಸಿಟಿ ಬಸ್‌ಗಳದ್ದೇ ದರ್ಬಾರು. ಇಲ್ಲಿ ಬಸ್ ಹತ್ತುವವರಿಂದ ಹಿಡಿದು ಬಸ್ ಓಡಿಸುವವರು, ಕ್ಲೀನರ್, ಎಜೆಂಟೂ, ಬಸ್ ಕಳುಹಿಸಲಿಕ್ಕೆ ಬರುವವರು ಎಲ್ಲಾರು ಒಂದು ಥರಾ ಆಡ್ತಾರೆ.&lt;br /&gt;ಸಿಟಿ ಬಸ್ ಆಗಲೇ ಸ್ಟ್ಯಾಂಡ್ ಬಿಟ್ಟು ಹೊರಟಿರುತ್ತೇ. ಹಿಂದಿನಿಂದ ಮಹಿಳೆಯೊಬ್ಬರು ಓಡಿ ಬರ್‍ತಾ ಇರ್‍ತಾರೆ. ಡ್ರೈವರ್ ಸ್ವಲ್ಪ ಸ್ಲೋ ಮಾಡ್ತಾನೆ. ಎಜೆಂಟ್ರು ಹಿಂದಿನ ಡೋರ್‌ನಲ್ಲಿ ನಿಂತು ಇಲ್ಲೇ ಹತ್ತಮ್ಮ ಅಂತ ಕೂಗ್ತಾ ಇರ್‍ತಾನೆ. ಆದರೂ ಆಕೆ ಅಲ್ಲಿ ಹತ್ತಲ್ಲ. ಮುಂದಿನ ಡೋರ್‌ನಲ್ಲಿಯೇ ಹತ್ತುತಾಳೆ.&lt;br /&gt;ನಮ್ಮ ಸಿಟಿ ಬಸ್‌ಗಳಲ್ಲೆಲ್ಲಾ ಮುಂದೆ ಮಹಿಳೆಯರು, ಹಿಂದೆ ಪುರುಷರು ಅಂತ ಬೋರ್ಡ್ ಹಾಕಿತ್ತಾರೆ. ಆದರೆ, ಇಂತಹ ಸಂದರ್ಭದಲ್ಲಿ ಹಿಂದಿನ ಡೋರ್‌ನಲ್ಲಿ ಹತ್ತಿದರೆ ಅವರ ಗಂಟು ಏನಾದರೂ ಖರ್ಚಾಗುತ್ತಾ? ಇಲ್ಲ. ಅದಕ್ಕೆ ಹೇಳಿದ್ದು ಸಿಟಿ ಬಸ್ ಕಂಡೊಡನೆ ಕಾಮನ್‌ಸೆನ್ಸ್ ಮರಿತಾರೆ ಅಂತ.&lt;br /&gt;ಇನ್ನೂ ಕೆಲವರು ಇರುತ್ತಾರೆ. ಅವರು ಎಷ್ಟೇ ದೂರದಿಂದ ನಿಂತರಲಿ. ಪುರುಷರ ಪಕ್ಕದ ಸೀಟಿನಲ್ಲಿ ಮಾತ್ರ ಕೂರುವುದಿಲ್ಲ. ನಮ್ಮ ಹುಡುಗುರು ಇರ್‍ತಾರಲ್ಲ ಅವರು ಹೆಣ್ಣು ಮಕ್ಕಳ ಪಕ್ಕ ಸೀಟು ಖಾಲಿ ಆಗುವುದನ್ನೇ ಕಾಯ್ತಿರುತ್ತಾರೆ. ಹಂಗೆ ಪುಸುಕ್ಕ ಅಂತ ಕೂತು ಬಿಡುತ್ತಾರೆ.&lt;br /&gt;ಇನ್ನೊಂದು ತರಹದ ಹುಡುಗಿಯವರು ಇರ್‍ತಾರೆ. ಅವರಿಗೆ ಒಬ್ನೆ ಒಂದು ಸೀಟಲ್ಲಿ ಕುಳಿತುಕೊಂಡವನನ್ನು ಕಂಡರೆ ಇಷ್ಟ. ಪ್ಲೀಸ್ ಹಿಂದಿನ ಸೀಟಲ್ಲಿ ಕೂರ್‍ತಿರಾ? ಅಂತಾರೆ. ಅವನು ಎದ್ದು ಆ ಸೀಟಲ್ಲಿ ಕೂರುವುದರ ಒಳಗೆ ಬೇರೆಯವರು ಅದಕ್ಕೆ ಬಂದು ಕೂತಿರುತ್ತಾರೆ. ಸೀಟು ಇಸ್ಕೊಂಡವರು ಇವನ ಕಡೆ ತಿರುಗಿ ಸಹ ನೋಡಲ್ಲ. ಯಾಕಂದ್ರೆ ಅವನು ಎಲ್ಲಾದರೂ ಸೀಟು ಕೇಳಿ ಬಿಟ್ರೆ.&lt;br /&gt;ಇನೂ? ಕೆಲವರು ಇರ್‍ತಾರೆ. ಅವರು ಇಳಿಬೇಕಾಗಿದ್ದು ಬಿಟ್ಟು ಮುಂದಿನ ಸ್ಟಾಪಿಗೆ ಬಸ್ ಹೋಗಲಿ ಅವರು ಮಾತನಾಡುವುದನ್ನು ಮಾತ್ರ ನಿಲ್ಸಲ.&lt;br /&gt;ಸಿಟಿ ಬಸ್ ಕೆಲ ಡ್ರೈವರ್‌ಗಳಿಗೆ ಒಂದು ಖಾಯಾಲಿ ಇರುತ್ತದೆ. ಅವರು ಯಾರೇ ಮುಂದಿನ ಸೀಟಲ್ಲಿ ಕೂತರೂ ಅವರನ್ನು ಮಾತನಾಡಿಸದೇ ಇರುವುದಿಲ್ಲ. ಇಲ್ಲ ಅಂದರೆ ಮೈಕ್ ರೀತಿ ಟೇಪ್ ರೇಕಾರ್ಡರ್ ಆದ್ರೂ ಹಾಕ್ತಾರೆ. ಕ್ಲೀನರ್ ಅನ್ನೋ ಪುಣ್ಯಾತ್ಮಂಗೆ ಮಾತ್ರ ಮುಂದಿನ ಡೋರೇ ಕಾರಾಸ್ಥಾನ.&lt;br /&gt;ಕೆಲ ಹುಡುಗುರು ಇರ್‍ತಾರೆ. ಮಹಿಳೆಯರಿಗೆ ಮೀಸಲು ಅನ್ನೋ ಸೀಟಲ್ಲಿ ಕೂತರೆ ಮಾತ್ರ ನಿದ್ದೆ ಬರೋದು. ಮತ್ತೊಂದಿಷ್ಟು ಜನಕ್ಕೆ ಬಸ್ ಹತ್ತಿದ ಮೇಲೆ ಮೊಬೈಲ್ ರಿಂಗ್‌ಟೋನ್ ಪ್ಲೇ ಮಾಡಿದ್ರೆನೇ ಅವರಿಗೆ ಸಮಾಧಾನ.&lt;br /&gt;ಇನ್ನೊಂದಿಷ್ಟು ಜನ ವಯಸ್ಕರು ಸ್ಟಾಪ್ ಅಲ್ಲದೇ ಇರುವ ಸ್ಥಳದಲ್ಲಿ ನಿಂತು ಬಸ್ಸಿಗೆ ಕೈ ಅಡ್ಡ ಹಾಕ್ತಾರೆ. ‘ಓ ಇದು ಅಲ್ಲಿಗೆ ಹೋಗಲ್ಲ. ಹಂಗಾದರೆ ಅಲ್ಲಿಗೆ ಹೋಗೋ ಬಸ್ ಎಷ್ಟೋತ್ತಿಗೆ ಬರುತ್ತೆ?’ ಅಂತೆಲ್ಲಾ ವಿಚಾರಿಸ್ತಾರೆ.&lt;br /&gt;ನಾನು ಇದುವರೆಗೂ ನೋಡಿರೋ ಸಿಟಿ ಬಸ್ ಪ್ರಯಾಣಿಕರು ಮಾಡೋ ಒಂದೇ ಒಂದು ಒಳ್ಳೆ ಕೆಲಸ- ಯಾರಾದರೂ ಮಹಿಳೆಯರು ಕಂಕುಳಲ್ಲಿ ಮಗು ಎತ್ತಿಕೊಂಡು ಬಂದ್ರೂ ಅಂದ ತಕ್ಷಣ ಸೀಟು ಖಾಲಿ ಇದ್ದರೂ ಪರವಾಗಿಲ್ಲ ಇವರು ಕುಳಿತುಕೊಂಡ ಜಾಗ ಬಿಟ್ಟು ಕೊಡುತ್ತಾರೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/175618676507441256-5230982886458153753?l=mavinasara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://mavinasara.blogspot.com/feeds/5230982886458153753/comments/default' title='Post Comments'/><link rel='replies' type='text/html' href='http://www.blogger.com/comment.g?blogID=175618676507441256&amp;postID=5230982886458153753' title='1 Comments'/><link rel='edit' type='application/atom+xml' href='http://www.blogger.com/feeds/175618676507441256/posts/default/5230982886458153753'/><link rel='self' type='application/atom+xml' href='http://www.blogger.com/feeds/175618676507441256/posts/default/5230982886458153753'/><link rel='alternate' type='text/html' href='http://mavinasara.blogspot.com/2007/08/blog-post.html' title='ಸಿಟಿ ಬಸ್ ಮತ್ತು ಕಾಮನ್‌ಸೆನ್ಸ್...'/><author><name>ಪ್ರವೀಣ್ ಮಾವಿನಸರ</name><uri>http://www.blogger.com/profile/13251939120641934507</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-175618676507441256.post-3922604674870760090</id><published>2007-07-12T23:26:00.000-07:00</published><updated>2008-12-09T17:42:58.295-08:00</updated><title type='text'>ನಿರ್ದಯಿಗಳು....ತಬ್ಬಲಿ ಮಗುವೂ....</title><content type='html'>&lt;a href="http://1.bp.blogspot.com/_EGz7kNqH9cg/RpcbZ0qYc9I/AAAAAAAAABY/aA3zxsTn2rc/s1600-h/BOY.JPG"&gt;&lt;img id="BLOGGER_PHOTO_ID_5086564434585351122" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://1.bp.blogspot.com/_EGz7kNqH9cg/RpcbZ0qYc9I/AAAAAAAAABY/aA3zxsTn2rc/s320/BOY.JPG" border="0" /&gt;&lt;/a&gt; ಈ ಚಿತ್ರವನ್ನೊಮ್ಮೆ ದಿಟ್ಟಿಸಿ ನೋಡಿ. ಕರುಳು ಚುರುಕ್ ಎನ್ನುತ್ತದೆ ಅಲ್ವಾ?.&lt;br /&gt;ಈ ಮಗುವೀಗ ತಬ್ಬಲಿ. ಆತನ ಪಾಲಿಗೆ ಪ್ರೀತಿ ತೋರಬೇಕಾದ, ಕೈ ತುತ್ತು ನೀಡಬೇಕಾದ ಅಪ್ಪ- ಅಮ್ಮ ಯಾರು ಇಲ್ಲ.&lt;br /&gt;ಈ ಮಗು ಮೊನ್ನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಗಿರಿಜನ ರಾಮೇಗೌಡ್ಲು ಮತ್ತು ಕಾವೇರಮ್ಮ ದಂಪತಿ ಎರಡನೇ ಪುತ್ರ ಆದರ್ಶ.&lt;br /&gt;ಆ ಕಡೆ ಪೊಲೀಸರು ಮಹಾನ್ ಸಾಧನೆಯಲ್ಲಿ ಬೀಗುತ್ತಿರುವಾಗಲೇ ಈ ಕಡೆ ಮಗುವೊಂದು ತಬ್ಬಲಿಯಾಯಿತು. ಈತನ ಇದ್ದೊಬ್ಬ ಅಣ್ಣ ಎನ್‌ಕೌಂಟರ್ ಸಂದರ್ಭದಲ್ಲಿ ಎಲ್ಲಿ ಹೋದ ಎಂಬುದು ಇದುವರೆಗೂ ತಿಳಿದಿಲ್ಲ.&lt;br /&gt;ನಾಲ್ವರು ಅಪರಾಧಿಗಳಿಗೆ ಶಿಕ್ಷೆಯಾಗದೇ ಇದ್ದರೂ ಪರವಾಗಿಲ್ಲ ಒಬ್ಬ ನಿರಾಪರಾಧಿಗೆ ಶಿಕ್ಷೆಯಾಗಬಾರದು ಎಂಬ ಸಂವಿಧಾನದ ಮೂಲ ಆಶಯವನ್ನೇ ಈ ಘಟನೆ ಅಣುಕಿಸುವಂತಿತ್ತು.&lt;br /&gt;ಏನು ಅರಿಯದ ಈ ಕೂಸು ಚಿಕ್ಕಮಗಳೂರು ಜಿಲ್ಲೆಯ ತನಿಕೋಡಿನ ಅಜ್ಜನ ಮನೆಯಲ್ಲಿದ್ದು ಓದುತ್ತಿದೆ. ಅಪ್ಪ- ಅಮ್ಮನನ್ನು ಪೊಲೀಸರು ಸಾಯಿಸಿದ್ದು ತಿಳಿಯುತ್ತಲೇ ‘ನನ್ನನ್ನು ಬಚ್ಚಿಡಿ, ನನ್ನನ್ನು ಸಾಯಿಸುತ್ತಾರೆ’ ಎಂದು ಗೋಗರೆಯುತ್ತಿತ್ತಂತೆ.&lt;br /&gt;ಎಸ್ಪಿ ವಿಫುಲ್‌ಕುಮಾರ್ ಈತನ ವಿದ್ಯಾಭ್ಯಾಸಕ್ಕೆ ಇಲಾಖೆಯಿಂದ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಎಲ್ಲಿಯ ಅಪ್ಪ- ಅಮ್ಮ, ಎಲ್ಲಿಯ ಆರ್ಥಿಕ ನೆರವು.!&lt;br /&gt;ನಕ್ಸಲರು- ಪೊಲೀಸರ ಜಿದ್ದಾಜಿದ್ದಿಗೆ ಇನ್ನೂ ಎಷ್ಟು ಮಕ್ಕಳು ಈ ರೀತಿ ತಬ್ಬಲಿಗಳಾಗಬೇಕೋ?.&lt;br /&gt;ಅನಾಥ ಮಗುವಾದೇ ಅಪ್ಪನೂ, ಅಮ್ಮನೂ ಇಲ್ಲ.... &lt;div&gt;&lt;br /&gt;&lt;strong&gt;ಮಂಗಳವಾರ ನಡೆದ  ಎನ್‌ಕೌಂಟರ್ ಬಗ್ಗೆ ನನಗೇನು ಬೇಜಾರು ಆಗಿರಲಿಲ್ಲ. ಶಸ್ತ್ರ ಹೆಗಲ ಮೇಲೆ ಹೊತ್ತು ತಿರುಗುವವರು ಎಂದಿದ್ದರೂ ಸಮಾಜಘಾತಕರು. ಆದರೆ, ಬುಧವಾರ ಈ ತಬ್ಬಲಿ ಚಿತ್ರ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತು.&lt;/strong&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/175618676507441256-3922604674870760090?l=mavinasara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://mavinasara.blogspot.com/feeds/3922604674870760090/comments/default' title='Post Comments'/><link rel='replies' type='text/html' href='http://www.blogger.com/comment.g?blogID=175618676507441256&amp;postID=3922604674870760090' title='7 Comments'/><link rel='edit' type='application/atom+xml' href='http://www.blogger.com/feeds/175618676507441256/posts/default/3922604674870760090'/><link rel='self' type='application/atom+xml' href='http://www.blogger.com/feeds/175618676507441256/posts/default/3922604674870760090'/><link rel='alternate' type='text/html' href='http://mavinasara.blogspot.com/2007/07/blog-post.html' title='ನಿರ್ದಯಿಗಳು....ತಬ್ಬಲಿ ಮಗುವೂ....'/><author><name>ಪ್ರವೀಣ್ ಮಾವಿನಸರ</name><uri>http://www.blogger.com/profile/13251939120641934507</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_EGz7kNqH9cg/RpcbZ0qYc9I/AAAAAAAAABY/aA3zxsTn2rc/s72-c/BOY.JPG' height='72' width='72'/><thr:total>7</thr:total></entry><entry><id>tag:blogger.com,1999:blog-175618676507441256.post-7624060337793926811</id><published>2007-06-22T13:26:00.000-07:00</published><updated>2007-06-22T14:08:11.747-07:00</updated><title type='text'>ಕಾಡಿನಿಂದ ದೂರವಾಗುತ್ತಿರುವ ಸಿಂಗಳಿಕಗಳು...</title><content type='html'>ಸಿಂಹ ಕೇಸರದ ದೈತ್ಯ ಗಾತ್ರದ ಮಂಗಗಳು ನಾಲ್ಕಾರು ಮಾರು ದೂರದ ಮರಕ್ಕೆ ಜಿಗಿಯುವುದನ್ನು ನೀವು ಡಿಸ್ಕವರಿ, ಅನಿಮಲ್ ಪ್ಲಾನೆಟ್, ನ್ಯಾಷನಲ್ ಜಿಯೋಗ್ರಾಫಿಕ್ ಚಾನಲ್‌ಗಳಲ್ಲಿ ವೀಕ್ಷಿಸಿರಬಹುದು.&lt;br /&gt;ಇಲ್ಲವೇ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಅಥವಾ ವಿಶ್ವವಿಖ್ಯಾತ ಜೋಗ್‌ಫಾಲ್ಸ್‌ನ ಅಕ್ಕಪಕ್ಕ ಮಿಂಚಿನಂತೆ ಕಂಡು ಕಾಣದಾಗುವ ಈ ರೀತಿಯ ಪ್ರಾಣಿ ನಿಮ್ಮ ಕಣ್ಣಿಗೂ ಬಿದ್ದಿರಬಹುದು. ಅಥವಾ ಮೈಸೂರು ಮೃಗಾಲಯದಲ್ಲಿ ಮನುಷ್ಯರನ್ನು ಕಂಡೊಡನೆ ಮಾರು ದೂರು ಹೋಗುವ ಈ ಮಂಗವನ್ನು ನೋಡಿರಬಹುದು.&lt;br /&gt;ಇವು ಸಿಂಗಳಿಕಗಳು ಅರ್ಥಾತ್ ಸಿಂಹ ಮುಖದ ಮಂಗಗಳು (LION TAILED MACAQUE). ಇವು ಜಗತ್ತಿನ ಅತ್ಯಂತ ಹಳೆಯ ಮಂಗಗಳು ಎಂದು ಹೆಸರು ಪಡೆದಿವೆ.&lt;br /&gt;ಈ ಸಿಂಗಳಿಕಗಳು ಇಂದು ಕಾಡಿನಿಂದ ದೂರವಾಗುತ್ತಿವೆ. ಒಂದು ಕಾಲದಲ್ಲಿ ಹಿಂಡು ಹಿಂಡಾಗಿ ವಾಸಿಸುತ್ತಿದ್ದ ಇವುಗಳು ಈಗ ಒಂದು ತಪ್ಪಿದರೆ ಇನ್ನೊಂದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾನವ ಇವುಗಳನ್ನು ಇಂದು ಅಳಿವಿನಂಚಿನಲ್ಲಿರುವ ಪ್ರಾಣಿಗಳು ಎಂಬ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಕಾರಣನಾಗಿದ್ದಾನೆ.&lt;br /&gt;ಸಿಂಗಳಿಕಗಳು ಭಾರತದಲ್ಲಿ ಪಶ್ಚಿಮಘಟ್ಟ ಪ್ರದೇಶ ಹಾಗೂ ದಕ್ಷಿಣ ಭಾರತದ ದಟ್ಟ ಕಾಡುಗಳಲ್ಲಿ ವಾಸಿಸುತ್ತವೆ. ಕರ್ನಾಟಕದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಹಾಗೂ ಶರಾವತಿ ಕಣಿವೆ ಇವುಗಳ ಪ್ರಮುಖ ಆವಾಸ ಸ್ಥಾನಗಳು.&lt;br /&gt;ಒಂದು ಗುಂಪು ಸಿಂಗಳಿಕ ವಾಸಿಸಲು ಸುಮಾರು ೨೫೦ ಹೆಕ್ಟೇರ್ ಪ್ರದೇಶ ಬೇಕಾಗುತ್ತದೆ. ಆದರೆ, ಭಾರತದಲ್ಲಿ ಈಗ ಉಳಿದಿರುವುದು ಸಿಂಗಳಿಕಗಳ ಮೂಲ ಆವಾಸಸ್ಥಾನ ಶೇ. ೧ ರಷ್ಟು ಮಾತ್ರ. ವ್ಯವಸಾಯ, ಟಿಂಬರ್‌ಗಳಿಗಾಗಿ, ಅಭಿವೃದ್ಧಿಗಾಗಿ ಅರಣ್ಯ ನಾಶ ಯಥೇಚ್ಛವಾಗಿ ಸಾಗಿದ್ದು ಸಿಂಗಳಿಕಗಳ ವಂಶಾಭಿವೃದ್ಧಿಗೆ ಕಂಟಕ ಪ್ರಾಯವಾಗಿ ಪರಿಣಮಿಸಿದೆ.&lt;br /&gt;ಇದಲ್ಲದೇ ಚೀನಾದಲ್ಲಿ ಸಿಂಗಳಿಕಗಳನ್ನು ಉಪಯೋಗಿಸಿ ತಯಾರಿಸುವ ಔಷಧ ಪದ್ಧತಿ ಬಹು ಜನಪ್ರಿಯವಾಗಿದ್ದು ಕಳ್ಳ ಮಾರ್ಗದ ಮೂಲಕ ಇವುಗಳ ರವಾನೆ ನಡೆಯುತ್ತಿದೆ. ಬೆಳೆಗಳನ್ನು ನಾಶ ಮಾಡುತ್ತವೆ ಎಂಬ ಕಾರಣಕ್ಕೆ ಲಂಗೂರ್‌ಗಳ ಜತೆಗೆ ಇವುಗಳ ಬೇಟೆ ಸಹ ನಡೆಯುತ್ತಿದೆ. ಈ ಎಲ್ಲಾ ಕಾರಣದಿಂದಾಗಿ ಸಿಂಗಳಿಕಗಳು ದಿನೇ- ದಿನೇ ಪ್ರಾಣಿ ಜಗತ್ತಿನಿಂದ ಕಣ್ಮರೆಯಾಗುವ ಹಾದಿಯಲ್ಲಿ ಸಾಗಿವೆ.&lt;br /&gt;ಐಯುಸಿಎನ್ ನಡೆಸಿದ ಸಮೀಕ್ಷೆ ಪ್ರಕಾರ ಭಾರತದಲ್ಲಿ ಇವುಗಳ ಸಂಖ್ಯೆ ಸದ್ಯ ೨೫೦೦ರ ಆಸುಪಾಸಿನಲ್ಲಿರುವುದು ಕಂಡು ಬಂದಿದೆ.&lt;br /&gt;ತಮಿಳಿನಲ್ಲಿ ಸಿಂಗವಾಲ್‌ಮಂತಿ, ಮಲೆಯಾಳಂನಲ್ಲಿ ಸಿಂಘವಾಲ್‌ನ ಎಂದು ಕರೆಸಿಕೊಳ್ಳುವ ಸಿಂಗಳಿಕಗಳು ಗುಂಪು ಗುಂಪಾಗಿ ವಾಸಿಸುತ್ತವೆ. ಬಲಿಷ್ಟವಾದ ಗಂಡು ತಂಡವನ್ನು ಮುನ್ನೆಡಸುತ್ತದೆ. ಈ ಗುಂಪಿನಲ್ಲಿ ಬಹಳಷ್ಟು ಹೆಣ್ಣುಗಳು ಇರುತ್ತವೆ. ಒಂದು ಗುಂಪಿನಲ್ಲಿ ೧೦ರಿಂದ ೨೦ ಸಿಂಗಳಿಕಗಳಿರುತ್ತವೆ. ತಂಡದಿಂದ ಹೊರಗಿರುವ ಗಂಡು ಸಿಂಗಳಿಕಗಳು ಗುಂಪಿನ ನೇತೃತ್ವವನ್ನು ವಹಿಸಿಕೊಳ್ಳಲು ಕಾದಾಟವನ್ನು ನಡೆಸುತ್ತಲೇ ಇರುತ್ತವೆ.&lt;br /&gt;ಸಿಂಗಳಿಕಗಳ ಸಂರಕ್ಷಣೆ&lt;br /&gt;ಸಿಂಗಳಿಕಗಳ ಸಂರಕ್ಷಣೆ ವಿಶ್ವದ ಬಹಳಷ್ಟು ಮೃಗಾಲಯಗಳಲ್ಲಿ ನಡೆಯುತ್ತಿದೆ. ಕರ್ನಾಟಕದ ಮೈಸೂರು ಮೃಗಾಲಯ ಇವುಗಳ ಸಂತಾನಭಿವೃದ್ಧಿಗೆ ಜರ್ಮನಿ ಸಂಸ್ಥೆಯೊಂದಿಗೆ ಇತ್ತೀಚೆಗಷ್ಟೆ ಒಪ್ಪಂದ ಮಾಡಿಕೊಂಡಿದೆ.&lt;br /&gt;ಇವುಗಳ ಅಂತಾರಾಷ್ಟ್ರೀಯ ವ್ಯಾಪಾರವನ್ನು ನಿರ್ಬಂಧಿಸಲಾಗಿದೆ. ಅಲ್ಲದೇ ಕೇಂದ್ರ ಸರ್ಕಾರ ಇವುಗಳನ್ನು ಸಂರಕ್ಷಣಾ ಪ್ರಾಣಿಗಳ ಪಟ್ಟಿಗೆ ಸೇರಿಸಿದೆ.&lt;br /&gt;ಪರಿಸರವಾದಿ ಉಲ್ಲಾಸ್ ಕಾರಂತ್ ೧೯೮೩-೮೪ರಲ್ಲಿ ಈ ಸಿಂಗಳಿಕಗಳ ಕುರಿತು ಒಂದು ವಿಸ್ತೃತ ಅಧ್ಯಯನ ನಡೆಸಿದರು. ಈ ಅಧ್ಯಯನ ವರದಿ ಅವುಗಳ ಆವಾಸಸ್ಥಾನ, ನಡವಳಿಕೆ, ಸಂಖ್ಯೆ, ಸಂರಕ್ಷಣೆ, ಕೈಗೊಳ್ಳಬೇಕಾದ ಕ್ರಮ ಎಲ್ಲವನ್ನು ಒಳಗೊಂಡಿತ್ತು. ಅಲ್ಲದೇ ಕುದುರೆಮುಖ ಪ್ರದೇಶ ಸಿಂಗಳಿಕಗಳಿಗೆ ಸೂಕ್ತ ಪ್ರದೇಶ ಒಂದು ಸೂಚಿಸಲಾಗಿತ್ತು.&lt;br /&gt;ಈ ವರದಿಯನ್ನು ಆದರಿಸಿ ಕೇಂದ್ರ ಸರ್ಕಾರ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಕುರಿತು ಅಧಿಸೂಚನೆ ಹೊರಡಿಸಲಾಗಿತ್ತು.&lt;br /&gt;ಇತ್ತೀಚಿನ ವರ್ಷಗಳಲ್ಲಿ ಇವುಗಳ ವಂಶಾಭಿವೃದ್ಧಿ ಆಶಾದಾಯಕ ಸ್ಥಿತಿಯಲ್ಲಿದೆ ಎಂದು ತಮಿಳುನಾಡಿನ ತೇಣಿ ಪ್ರದೇಶದ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.&lt;br /&gt;ಸಾಮಾನ್ಯವಾಗಿ ಸಿಂಗಳಿಕಗಳು ಕರ್ನಾಟಕ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಶರಾವತಿ ವನ್ಯಜೀವಿ ಪ್ರದೇಶ, ಕೇರಳದ ಸೈಲೆಂಟ್ ವ್ಯಾಲಿರಿ ರಾಷ್ಟ್ರೀಯ ಉದ್ಯಾನ, ತಮಿಳುನಾಡಿನ ಕಾಲಕ್ಕಾಡ್ ಮತ್ತು ಅಣ್ಣಾಮಲೈ ಅಭಯಾರಣ್ಯಗಳಲ್ಲಿ ಕಾಣ ಸಿಗುತ್ತವೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/175618676507441256-7624060337793926811?l=mavinasara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://mavinasara.blogspot.com/feeds/7624060337793926811/comments/default' title='Post Comments'/><link rel='replies' type='text/html' href='http://www.blogger.com/comment.g?blogID=175618676507441256&amp;postID=7624060337793926811' title='5 Comments'/><link rel='edit' type='application/atom+xml' href='http://www.blogger.com/feeds/175618676507441256/posts/default/7624060337793926811'/><link rel='self' type='application/atom+xml' href='http://www.blogger.com/feeds/175618676507441256/posts/default/7624060337793926811'/><link rel='alternate' type='text/html' href='http://mavinasara.blogspot.com/2007/06/blog-post_22.html' title='ಕಾಡಿನಿಂದ ದೂರವಾಗುತ್ತಿರುವ ಸಿಂಗಳಿಕಗಳು...'/><author><name>ಪ್ರವೀಣ್ ಮಾವಿನಸರ</name><uri>http://www.blogger.com/profile/13251939120641934507</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>5</thr:total></entry><entry><id>tag:blogger.com,1999:blog-175618676507441256.post-3562443668128746730</id><published>2007-06-04T13:58:00.000-07:00</published><updated>2007-06-04T14:00:48.834-07:00</updated><title type='text'>ಕಾಟಾಚಾರದ ವಿಶ್ವಪರಿಸರ ದಿನ ಬೇಡ</title><content type='html'>ಜೂನ್ ೫ ವಿಶ್ವ ಪರಿಸರ ದಿನ. ವಿಶ್ವದ ಎಲ್ಲೆಡೆ ಪರಿಸರದ ಕಹಳೆ. ಹಾಗೇ ಈ ಅಂಗವಾಗಿ ನಮ್ಮ ದೇಶ, ರಾಜ್ಯದಲ್ಲೂ ವಿವಿಧ ಕಾರ್ಯಕ್ರಮಗಳು.&lt;br /&gt;ವಿಶ್ವ ಪರಿಸರ ದಿನಾಚರಣೆ ಈ ಒಂದು ದಿನಕ್ಕೆ ಸೀಮಿತವಾದರೆ ಸಾಕೇ? ಎಂಬುದು ಈಗ ನಮ್ಮ ಮುಂದಿರುವ ಪ್ರಶ್ನೆ. ಈ ಒಂದು ದಿನ ಭಾಷಣ ಮಾಡುವುದಕ್ಕೆ, ಸಸಿ ನೆಡುವುದಕ್ಕೆ, ಪೋಟೋಕ್ಕೊಂದು ಫೋಸ್ ನೀಡಿ ಪತ್ರಿಕೆಗಳಿಗೆ ಕಳಿಸುವುದಕ್ಕೆ ಸೀಮೀತವಾಗುವುದು ಬೇಡ.&lt;br /&gt;ವಿಶ್ವ ಪರಿಸರ ದಿನವನ್ನು ಪ್ರಮುಖ ಉದ್ದೇಶವನ್ನಾಗಿಟ್ಟುಕೊಂಡು ಒಂದಿಷ್ಟು ಉತ್ತಮ ಕೆಲಸಗಳನ್ನು ಸರ್ಕಾರ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ರೂಪಿಸುವಂತಾಗಬೇಕು. ಆ ಕೆಲಸಗಳು ಕೆಳ ಹಂತದ ಸಾಮಾನ್ಯ ಜನರನ್ನು ಮುಟ್ಟಬೇಕು. ಜೊತೆಗೆ ಅವರು ಅದರಲ್ಲಿ ಭಾಗಿಯಾಗುವಂತಿರಬೇಕು. ಹಾಗಾದರೇ ಮಾತ್ರ ವಿಶ್ವ ಪರಿಸರ ದಿನಾಚರಣೆಗೊಂದು ಆರ್ಥ ಬರುತ್ತದೆ.&lt;br /&gt;ಪರಿಸರ ಇಂದು ಅಸಮಾತೋಲನದ ಗೂಡಾಗಿದೆ. ಎಲ್ಲೆಂದರಲ್ಲಿ ಸಮಸ್ಯೆಗಳು ಜನತೆಯನ್ನು ಕಾಡುತ್ತಿವೆ. ಧೂಳು, ಬಿಸಿಲು, ಅತೀವೃಷ್ಟಿ, ಅನಾವೃಷ್ಟಿಗಳದ್ದೇ ಕಾರುಬಾರಾಗಿದೆ.&lt;br /&gt;ಇದ್ದುದ್ದರಲ್ಲಿಯೇ ಗ್ರಾಮೀಣ ಪ್ರದೇಶಗಳೇ ಪರವಾಗಿಲ್ಲ. ಅಲ್ಲಿ ಪರಿಸರ ನಗರ ಪ್ರದೇಶಗಳಷ್ಟು ಹಾಳಾಗಿಲ್ಲ. ದೊಡ್ಡ ದೊಡ್ಡ ನಗರಗಳು ‘ಪ್ರಾಬ್ಲಲಮ್ಸ್ ಟ್ಯಾಂಕ್’ಗಳಾಗಿವೆ. ಒಂದು ಬಗೆಹರಿದರೆ ಇನ್ನೊಂದು ಹುಟ್ಟಿಕೊಳ್ಳುವಂತಾಗಿದೆ. ಅಲ್ಲಿನ ಶಬ್ದ ಮಾಲಿನ್ಯ ಜನತೆಯ ನೆಮ್ಮದಿಯನ್ನು ಕಿತ್ತು ಹಾಕಿದೆ.&lt;br /&gt;ಹೀಗಿರುವ ಹತ್ತು ಹಲವು ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಒಂದಿಷ್ಟು ಯೋಜನೆಗಳ ರೂಪುಗೊಳ್ಳಲೇಬೇಕು. ಅದು ಪರಿಸರ ಸಮತೋಲನಕ್ಕಾಗಿ...&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/175618676507441256-3562443668128746730?l=mavinasara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://mavinasara.blogspot.com/feeds/3562443668128746730/comments/default' title='Post Comments'/><link rel='replies' type='text/html' href='http://www.blogger.com/comment.g?blogID=175618676507441256&amp;postID=3562443668128746730' title='1 Comments'/><link rel='edit' type='application/atom+xml' href='http://www.blogger.com/feeds/175618676507441256/posts/default/3562443668128746730'/><link rel='self' type='application/atom+xml' href='http://www.blogger.com/feeds/175618676507441256/posts/default/3562443668128746730'/><link rel='alternate' type='text/html' href='http://mavinasara.blogspot.com/2007/06/blog-post.html' title='ಕಾಟಾಚಾರದ ವಿಶ್ವಪರಿಸರ ದಿನ ಬೇಡ'/><author><name>ಪ್ರವೀಣ್ ಮಾವಿನಸರ</name><uri>http://www.blogger.com/profile/13251939120641934507</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-175618676507441256.post-1888761145834347557</id><published>2007-05-27T12:53:00.000-07:00</published><updated>2008-12-09T17:42:58.563-08:00</updated><title type='text'>ಮೂಡೌಟ್ ಮಾಡುವ ಮಾಣಿಕ್ಯಧಾರೆ...</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_EGz7kNqH9cg/Rlni_v-cR1I/AAAAAAAAABQ/5Js4QsyG8NE/s1600-h/dhara.jpg"&gt;&lt;img id="BLOGGER_PHOTO_ID_5069332440420206418" style="DISPLAY: block; MARGIN: 0px auto 10px; CURSOR: pointer; TEXT-ALIGN: center" alt="" src="http://2.bp.blogspot.com/_EGz7kNqH9cg/Rlni_v-cR1I/AAAAAAAAABQ/5Js4QsyG8NE/s320/dhara.jpg" border="0" /&gt;&lt;/a&gt;&lt;br /&gt;ನಿಸರ್ಗದತ್ತ ಪ್ರವಾಸಿ ತಾಣಗಳು ಪ್ರವಾಸಿಗರ ಒತ್ತಡದಿಂದ ಹೇಗೆ ಕುಲಗೆಟ್ಟು ಹೋಗುತ್ತಿವೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಮಾಣಿಕ್ಯಧಾರ.&lt;br /&gt;ವಿವಾದಿತ ಬಾಬಾಬುಡನ್‌ಗಿರಿಗೆ ಅಂಟಿಕೊಂಡಂತೆಯೇ ಇರುವ ಮಾಣಿಕ್ಯಧಾರದಲ್ಲಿ ಈಗ ಎಲ್ಲವೂ ಪ್ರವಾಸಿಗರದ್ದೇ ಕಾರುಬಾರು. ಬಾಬಾಬುಡನ್‌ಗಿರಿಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಇದು ಶೋಲಾ ಅರಣ್ಯ ಪ್ರದೇಶದಲ್ಲಿನ ರಮ್ಯ ತಾಣ. ಹೆಸರಿಗೆ ತಕ್ಕಂತೆ ಇಲ್ಲಿ ಹಲವು ಆಳೆತ್ತರದಿಂದ ಜಲಧಾರೆಯೊಂದು ಧುಮುಕುತ್ತದೆ. ಎಂತಹ ಬಿರು ಬೇಸಿಗೆಯಲ್ಲೂ ಇಲ್ಲಿನ ನೀರು ಬಿಸಿಯಾಗುವುದಿಲ್ಲ. ಪ್ರಿಜ್‌ನಲ್ಲಿಟ್ಟ ವಾಟರ್‌ನಂತೆ ತಣ್ಣಗೆ ಇರುತ್ತದೆ.&lt;br /&gt;ಅಲ್ಲದೇ ಇಲ್ಲಿನ ನೀರಿನಲ್ಲಿ ಸ್ನಾನ ಮಾಡಿದರೆ ಕಾಯಿಲೆ- ಕಸಾಲೆಗಳು ದೂರವಾಗುತ್ತವೆ ಎಂಬ ನಂಬಿಕೆ ಬಲವಾಗಿದೆ.&lt;br /&gt;ಕಳೆದ ಕೆಲ ದಿನಗಳ ಹಿಂದೆ ನಾವೊಂದಿಷ್ಟು ಜನ ಸಹೊದ್ಯೋಗಿಗಳು ಮಾಣಿಕ್ಯಧಾರಕ್ಕೆ ಶಿವಮೊಗ್ಗದಿಂದಲೇ ಅಂಗಿ ಬಿಚ್ಚಿಕೊಂಡು ಹೋಗಿದ್ವಿ (ಅಪಾರ್ಥ ಬೇಡ. ಅಲ್ಲಿನ ಐಸ್‌ನಂತಹ ನೀರಿನಲ್ಲಿ ಸ್ನಾನ ಮಾಡಬೇಕೆಂದು). ಆದರೆ, ಆಗಿದ್ದೇ ಬೇರೆ. ಅಲ್ಲಿ ಹೋಗುತ್ತಿದಂತೆ ಎಲ್ಲರಿಗೂ ಮೂಡ್ ಔಟ್. ನಾ.. ಸ್ನಾನ ಮಾಡಲಪ್ಪ ನಾ.. ಮಾಡಲ್ಲ...&lt;br /&gt;ಅಂತಹ ಪರಿಸ್ಥಿತಿ ಅಲ್ಲಿತ್ತು. ಹೆಂಗಸರು, ಮಕ್ಕಳು ಎನ್ನದೇ ನೂರಾರು ಜನ ಮಾಣಿಕ್ಯಧಾರೆಗೆ ತಲೆ ಒಡ್ಡುವ ಸ್ಥಿತಿ ಇತ್ತಲ್ಲ ಅದು ಎಂತಹವರಿಗೂ ರೇಜಿಗೆ ಹುಟ್ಟಿಸುತ್ತದೆ.&lt;br /&gt;ಒಂದು ಕಡೆ ಒಂದಿಷ್ಟು ಜನ ಸ್ನಾನ ಮಾಡುತ್ತಿದ್ದರೆ ಮತ್ತೊಂದು ಕಡೆ ಪೋಟೋಕ್ಕೆ ಫೋಸ್ ಕೋಡುವವರು ಬೇರೆ. ಇನ್ನೊಂದು ಕಡೆ ಯಾವ ಅಂಜಿಕೆಯೂ ಇಲ್ಲದೇ ಡ್ರೆಸ್ ಚೇಂಜ್ ಮಾಡುವ ಹೆಂಗಸರು. ಸಾಕೋ, ಸಾಕು ನಮ್ಮಪ್ಪ ಅಂದು ಅಲ್ಲಿಂದ ಓಟ ಕಿತ್ತಿದ್ದೇವು.&lt;br /&gt;ಇಲ್ಲಿ ಇನ್ನೊಂದು ನಂಬಿಕೆ ಇದೆ. ಇಲ್ಲಿ ಸ್ನಾನ ಮಾಡಿದ ನಂತರ ಹಾಕಿಕೊಂಡು ಬಂದ ಬಟ್ಟೆಯನ್ನು ತೆಗೆದು ಇಲ್ಲಿಯೇ ಎಸೆದು ಹೋಗಬೇಕು ಎಂದು. ಇದರಿಂದಾಗಿ ಇಲ್ಲಿ ಬಟ್ಟೆಗಳ ಗುಡ್ಡೆಯೇ ಬಿದ್ದಿದೆ. ಅವುಗಳಿಗೆ ಹಾಕಿದ ಬೆಂಕಿಯ ಕಮಟು ವಾಸನೆ ಇಡೀ ಪರಿಸರಕ್ಕೆ ಹರಡಿಕೊಂಡಿತ್ತು. ಮೆಟ್ಟಿಲು, ಮೆಟ್ಟಿಲಲ್ಲು ಭಿಕ್ಷಕರು ಬೇರೆ.&lt;br /&gt;ಅಲ್ಲಿಗೆ ಬಂದಿದಕ್ಕೆ ಲಾಸ್ ಇಲ್ಲ ಅಂದರೆ. ಅಲ್ಲಿರುವ ಗಿಡಮೂಲಿಕೆ ಮಾರಾಟಗಾರರು. ಹತ್ತು ಹಲವಾರು ರೋಗಗಳಿಗೆ ಇಲ್ಲಿ ‘ಓರಿಜಿನಲ್’ ಗಿಡಮೂಲಿಕೆ ಕಡಿಮೆ ದರದಲ್ಲಿ ದೊರೆಯುತ್ತದೆ.&lt;br /&gt;&lt;em&gt;&lt;span style="color:#3333ff;"&gt;ಚಿತ್ರ: ಆರ್.ಎಸ್. ಹಾಲಸ್ವಾಮಿ&lt;/span&gt;&lt;/em&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/175618676507441256-1888761145834347557?l=mavinasara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://mavinasara.blogspot.com/feeds/1888761145834347557/comments/default' title='Post Comments'/><link rel='replies' type='text/html' href='http://www.blogger.com/comment.g?blogID=175618676507441256&amp;postID=1888761145834347557' title='3 Comments'/><link rel='edit' type='application/atom+xml' href='http://www.blogger.com/feeds/175618676507441256/posts/default/1888761145834347557'/><link rel='self' type='application/atom+xml' href='http://www.blogger.com/feeds/175618676507441256/posts/default/1888761145834347557'/><link rel='alternate' type='text/html' href='http://mavinasara.blogspot.com/2007/05/blog-post_27.html' title='ಮೂಡೌಟ್ ಮಾಡುವ ಮಾಣಿಕ್ಯಧಾರೆ...'/><author><name>ಪ್ರವೀಣ್ ಮಾವಿನಸರ</name><uri>http://www.blogger.com/profile/13251939120641934507</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_EGz7kNqH9cg/Rlni_v-cR1I/AAAAAAAAABQ/5Js4QsyG8NE/s72-c/dhara.jpg' height='72' width='72'/><thr:total>3</thr:total></entry><entry><id>tag:blogger.com,1999:blog-175618676507441256.post-7766647532328866515</id><published>2007-05-14T13:55:00.000-07:00</published><updated>2008-12-09T17:42:58.689-08:00</updated><title type='text'>ಕರ್ನಾಟಕದ ಮೌನ ಕಣಿವೆಯಲ್ಲಿ ಅಲ್ಲೋಲ- ಕಲ್ಲೋಲ</title><content type='html'>&lt;a href="http://3.bp.blogspot.com/_EGz7kNqH9cg/RkjROc5HiuI/AAAAAAAAAAs/N8Dg7ZM4h68/s1600-h/KAVLEDUR.JPG"&gt;&lt;img id="BLOGGER_PHOTO_ID_5064527827182258914" style="FLOAT: left; MARGIN: 0px 10px 10px 0px; CURSOR: hand" alt="" src="http://3.bp.blogspot.com/_EGz7kNqH9cg/RkjROc5HiuI/AAAAAAAAAAs/N8Dg7ZM4h68/s320/KAVLEDUR.JPG" border="0" /&gt;&lt;/a&gt; ಹೌದು. ‘ಕರ್ನಾಟಕದ ಮೌನ ಕಣಿವೆ’ ಎಂದೇ ಖ್ಯಾತವಾಗಿರುವ ಶರಾವತಿ ನದಿ ಕೊಳ್ಳ(ಕಣಿವೆ)ದಲ್ಲಿ ಅಲ್ಲೋಲ- ಕಲ್ಲೋಲ ನಡೆಯುತ್ತಿದೆ. ಇದು ಪರಿಸರವಾದಿಗಳ ಗಮಕ್ಕೆ ಬಂದರೂ ಅವರ ಕೂಗು ಗಿರಿ ಮುಟ್ಟುತ್ತಿಲ್ಲ. ಅಧಿಕಾರಸ್ಥರ ಗಮನದಲ್ಲಿದ್ದರೂ ಅದು ನಮಗೆ ಸಂಬಂಧಿಸಿದ್ದಲ್ಲ ಎನ್ನುತ್ತಿದ್ದಾರೆ. ಸ್ಥಳೀಯರು ಗೊತ್ತು ಗೊತ್ತಿಲ್ಲದಂತೆ ನಟಿಸುತ್ತಿದ್ದಾರೆ.&lt;br /&gt;ಶರಾವತಿ ಕರ್ನಾಟಕ ಜೀವ ನದಿ ಅಲ್ಲದಿದ್ದರೂ ಬೆಳಕಿನ ನದಿಯಂತೂ ನಿಜ. ರಾಜ್ಯದ ಬಹಳಷ್ಟು ವಿದ್ಯುತ್ ಬೇಡಿಕೆಯನ್ನು ಪೂರೈಸುತ್ತಿರುವುದು ಶರಾವತಿಯ ಜೋಗ್ ವಿದ್ಯುದಾಗಾರ.&lt;br /&gt;ಸಮೃದ್ಧ ಜೀವ ವೈವಿಧ್ಯತೆಯನ್ನು ಹೊಂದಿದ ಶರಾವತಿ ಹಲವಾರು ಕೌತುಕಗಳ ಕಣಜ. ಅಲ್ಲದೇ ನಾಡಿಗೆ ಶರಾವತಿಯ ಕೊಡುಗೆ ಅಪಾರ ಮತ್ತು &lt;div&gt;ಮೂಲ್ಯವಾದದ್ದು. ವಿದ್ಯುತ್, ಕೃಷಿ, ಕುಡಿಯುವ ನೀರು, ಸಸ್ಯ ಸಂಕುಲ, ಜೀವ ವೈವಿಧ್ಯತೆ, ಮರಳು ಹೀಗೆ ಹಲವಾರು ಸೃಷ್ಟಿ ಉತ್ಪಾದನೆಗೆ ಕಾರಣವಾದ ಶರಾವತಿಯ ಪಾತ್ರ ಆಸಕ್ತಿ ಮೂಡಿಸುತ್ತಿದೆ.&lt;br /&gt;ಆದರೆ, ಇಂದು ಶರಾವತಿ ಕೊಳ್ಳ ಅವ್ಯಾಹತ ದಾಂದಲೆಗಳ ತಾಣವಾಗಿ ಮಾರ್ಪಟ್ಟಿದೆ. ಮರಗಳ ಹನನ, ವ್ಯವಸಾಯಕ್ಕಾಗಿ ಒತ್ತುವರಿ, ನೆಡತೋಪುಗಳ ನಿರ್ಮಾಣ, ಕಲ್ಲು ಗಣಿಗಾರಿಕೆ, ಪ್ರಾಣಿಗಳ ಬೇಟೆ ಇತ್ಯಾದಿಗಳು ಏಗ್ಗಿಲ್ಲದೆ ನಡೆದುಕೊಂಡು ಹೋಗುತ್ತಿವೆ.&lt;br /&gt;ಶರಾವತಿ ಉಗಮಸ್ಥಾನ ಅಂಬುತೀರ್ಥ ಸುತ್ತಮುತ್ತಲಿನ ಒಂದಿಂಚೂ ಕಾಡನ್ನು ಬಿಡದೇ ಸಾಮಾಜಿಕ ಅರಣ್ಯವನ್ನು ನಾಶಗೊಳಿಸಿ ಏಕ ಜಾತಿ ಅಕೇಶಿಯಾ, ನೀಲಗಿರಿ, ಮ್ಯಾಗ್ಜಿಯಂ ನೆಡತೋಪುಗಳ ನಿರ್ಮಾಣ ಮಾಡಲಾಗಿದೆ.&lt;br /&gt;ಹೊಸನಗರ ಸಮೀಪದ ನದಿ ಇಕ್ಕೆಲಗಳಲ್ಲಿ ಅವ್ಯಾಹತವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇದರಿಂದಾಗಿ ಮಳೆಗಾಲದಲ್ಲಿ ಮಣ್ಣು ಸಾರಾಗವಾಗಿ ನದಿಯನ್ನು ಸೇರಿ ಹೂಳು ತುಂಬುತ್ತಿದೆ. ಜತೆಗೆ ನದಿ ಪಾತ್ರದಿಂದ ಮರಳು ತೆಗೆದು ಮಾರಾಟ ಮಾಡುವ ಧಂದೆ ಸಹ ಚಾಲ್ತಿಯಲ್ಲಿದೆ.&lt;br /&gt;ಪ್ರಾಣಿಗಳ ಬೇಟೆ, ವ್ಯವಸಾಯಕ್ಕಾಗಿ ಅಕ್ರಮ ಒತ್ತುವರಿ ಇವುಗಳಿಗೆ ಕಡಿವಾಣವೇ ಇಲ್ಲದಂತಾಗಿದೆ. ಸಿಂಹ ಮುಖದ ಸಿಂಗಳೀಕನಿಂದ ಹಿಡಿದು ಮೊಲದ ವರೆಗೆ ಕೊಳ್ಳ ಪ್ರದೇಶದಲ್ಲಿ ಸಾಮಾನ್ಯವಾಗಿದ್ದ ಪ್ರಾಣಿಗಳ ಸಂಖ್ಯೆ ನಶಿಸಿ ಹೋಗುತ್ತಿದೆ. ಇದ್ದರೂ ಅಲ್ಲೊಂದು ಇಲ್ಲೊಂದು ಎನ್ನುವಂತಾಗಿದೆ.&lt;br /&gt;ಶರಾವತಿ ನದಿ ಶಿವಮೊಗ್ಗ ಜಿಲ್ಲೆಯ ಗಡಿ ದಾಟುವ ಕೋಗಾರು ಘಾಟಿ ಪ್ರದೇಶದಲ್ಲಿ ಲಾವಂಚ ಬೆಳೆಸಲು ಹಾಗೂ ಬೇಯಿಸಲು ಮರಗಳನ್ನು ಕಡಿಯಲಾಗುತ್ತಿದೆ.&lt;br /&gt;೧೯೬೪ರಲ್ಲಿ ಶರಾವತಿಗೆ ಅಣೆಕಟ್ಟು ಕಟ್ಟುವ ಮುನ್ನ ಕೊಳ್ಳ ಪ್ರದೇಶದಲ್ಲಿ ವಾರ್ಷಿಕ ೩೨೦ ಇಂಚು ಮಳೆಯಾಗುತ್ತಿತ್ತು. ಆದರೆ, ಈಗ ೬೦ ಇಂಚಿಗೂ ಕಡಿಮೆಯಾಗಿದೆ.&lt;br /&gt;ಒಟ್ಟಿನಲ್ಲಿ ಕರ್ನಾಟಕ ಮೌನ ಕಣಿವೆಯ ಬಿಕೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.&lt;br /&gt;ಶರಾವತಿ&lt;br /&gt;ಶರಾವತಿ ಪಶ್ಚಿಮಘಟ್ಟದ ಪ್ರಮುಖ ನದಿಗಳಲ್ಲೊಂದು. ಜತೆಗೆ ಕರ್ನಾಟಕದ ಬೆಳಕಿನ ನದಿ. ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥದಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿಯುತ್ತದೆ. ಈ ಬೆಳಕಿನ ನದಿಗೆ ಹೊಸನಗರದ ಪಟಗುಪ್ಪಾ ಬಳಿ ಹರಿದ್ರಾವತಿ ನದಿ ಸೇರಿಕೊಳ್ಳುತ್ತದೆ. ಬಾರಂಗಿ ಎಂಬಲ್ಲಿ ಎಣ್ಣೆಹೊಳೆ ಎಂಬ ಇನ್ನೊಂದು ನದಿ ಸಂಗಮವಾಗುತ್ತದೆ.&lt;br /&gt;ಅಂಬುತೀರ್ಥದಿಂದ ಪ್ರಾರಂಭವಾಗಿ ೧೩೨ ಕಿ.ಮೀ. ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುವ ಮುನ್ನ ಸುಮಾರು ೧೨ ನದಿಗಳು ಶರಾವತಿಯನ್ನು ಸೇರುತ್ತವೆ. ಹೀಗಾಗಿ ಶರಾವತಿ ಬಾರಂಗಿ ಹೊಳೆ, ಬಾಣಾವತಿ, ಬಾರಗಂಗಾ, ಗೇರುಸೊಪ್ಪ ಎಂಬ ಹೆಸರು ಪಡೆದಿದೆ.&lt;br /&gt;ಶ್ರೀರಾಮಚಂದ್ರನು ವನವಾಸ ಕಾಲದಲ್ಲಿ ನೀರಾಡಿಕೆಯಾಗಿ ಅಂಬನ್ನು ಹೊಡೆದಿದ್ದರಿಂದ ಶರಾವತಿ ಉಗಮಗೊಂಡಳು. ಆದ್ದರಿಂದ ಈ ಪ್ರದೇಶಕ್ಕೆ ಅಂಬುತೀರ್ಥ ಎಂಬ ಹೆಸರು ಬಂದಿತು ಇತಿಹ್ಯವಿದೆ.&lt;br /&gt;ವೈಶಿಷ್ಟ್ಯತೆ&lt;br /&gt;ಜಗತ್ ಪ್ರಸಿದ್ಧ ಜೋಗ ಜಲಪಾತ ಶರಾವತಿ ಕೊಡುಗೆ. ೨೫೦ ಗಜ ಅಗಲದ ಹಾಸುಗಲ್ಲಿನ ಮೇಲೆ ೯೬೦ ಅಡಿ ಎತ್ತರದಿಂದ ಕಣಿವೆಗೆ ಧುಮುಕುವ ಶರಾವತಿ ಭವ್ಯತೆ ಬೆರಗು ಮೂಡಿಸುತ್ತದೆ.&lt;br /&gt;೧೯೫೬ರಲ್ಲಿ ಹೊನ್ನೆಮರಡು ಯೋಜನೆ ಪ್ರಾರಂಭವಾಗಿ ನಂತರದ ದಿನಗಳಲ್ಲಿ ಶರಾವತಿ ಜಲ ವಿದ್ಯುತ್ ಯೋಜನೆ ಎಂದು ಬದಲಾಯಿತು. ಶರಾವತಿ ಬಹುಪಾಲು ನೀರು ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತಿದೆ.&lt;br /&gt;ಶರಾವತಿಯ ವ್ಯಾಪ್ತಿ ಗ್ರೇಟ್ ವೇ ಆಫ್ ಟ್ರೇಡ್ ಎಂದು ಪ್ರಸಿದ್ಧಿಯಾದ ಮೆಣಸಿನ ರಾಣಿ ಭೈರಾದೇವಿ ಆಡಳಿತ ಕಕ್ಷೆಯೊಳಗಿತ್ತು.&lt;br /&gt;ಶರಾವತಿ ಕೊಳ್ಳ ಅಪರೂಪದ ಸಿಂಗಳೀಕ (ಔಟಿ ಡಿbಟeಜ mbಠ್ಡಿbಠಿe) ಹಾಗೂ ಇತರ ಕಾಡು ಪ್ರಾಣಿಗಳ ವಾಸ ತಾಣವಾಗಿದೆ.&lt;br /&gt;ಇತಿಹಾಸ ಪ್ರಸಿದ್ಧ ಕಾನೂರು ಕೋಟೆ, ಶ್ರೀರಾಮಚಂದ್ರಪುರಮಠ ಈ ನದಿ ದಂಡೆಯಲ್ಲಿವೆ.&lt;br /&gt;ಶರಾವತಿ ಅವಲೋಕನ&lt;br /&gt;ಕೆಲ ಪರಿಸರ ಹೋರಾಟಗಾರರು ೨೦೦೫ರ ಜನವರಿ ೨೦ರಿಂದ ಫೆಬ್ರವರಿ ೨ರ ವರೆಗೆ ಅಂಬುತೀರ್ಥದಿಂದ ಹೊನ್ನಾವರದ ವರೆಗೆ ‘ಶರಾವತಿ ಅವಲೋಕನ’ವನ್ನು ಆಯೋಜಿಸಿದ್ದರು.&lt;br /&gt;ಇದರಲ್ಲಿ ಶಿರಸಿಯ ಪರಿಸರ ಸಂರಕ್ಷಣಾ ಕೇಂದ್ರದ ಪಾಂಡುರಂಗ ಹೆಗಡೆ, ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜು ಪ್ರಾಂಶುಪಾಲ ಪ್ರೆ.ಟಿ.ಎಸ್. ಹೂವಯ್ಯಗೌಡ, ಹೊಸನಗರದ ಪಿ.ಎನ್. ನರಸಿಂಹಮೂರ್ತಿ ಪ್ರಮುಖರು.&lt;br /&gt;ಸುಮಾರು ೧೪ ದಿನಗಳ ಕಾಲ ಕೊಳ್ಳ ಪ್ರದೇಶದಲ್ಲಿ ಪಾದಯಾತ್ರೆಯನ್ನು ವಿದ್ಯಾರ್ಥಿಗಳು, ವಿಜ್ಞಾನಿಗಳು, ಯುವಕ ಯುವತಿಯರು, ವಿವಿಧ ಸಮುದಾಯದ ಜನರೊಂದಿಗೆ ಹಮ್ಮಿಕೊಂಡು ಈ ಮೌನ ಕಣಿವೆಯ ಬಗ್ಗೆ ಜಾಗೃತಿ, ಜನಾಭಿಪ್ರಾಯ, ಸ್ಥಿತಿಗತಿ ಅಧ್ಯಯನ, ಚಿಂತನ- ಮಂಥನ ಮೂಲಕ ಅವಿರತ ಪ್ರಯತ್ನ ನಡೆಸಿದ್ದರು. ಕೆಲ ನಿರ್ಣಯಗಳನ್ನು ಅಂಗೀಕರಿಸಿ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದರು.&lt;br /&gt;ಆದರೆ, ಇದು ಯಾವುದು ಬಹು ಕಾಲ ಅಲ್ಲಿನ ಜನರ ಮೇಲೆ ಪ್ರಭಾವ ಬೀರಲಿಲ್ಲ ಮತ್ತು ಸರ್ಕಾರ ಈ ದಿಸೆಯಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂಬುದು ದುರಂತ ಸಂಗತಿ.&lt;br /&gt;ಇನ್ನೊಂದು ಎಂದರೆ ಚಿಪ್ಕೆ ಚಳವಳಿ ನೇತಾರ ಸುಂದರ್‌ಲಾಲ್ ಬಹುಗುಣ ದಂಪತಿ ಈ ಅವಲೋಕನಕ್ಕೆ ಚಾಲನೆ ನೀಡಿದ್ದರು. ಅಲ್ಲದೇ ನಾ. ಡಿಸೋಜಾರಂತಹ ಹಲವು ಸಾಹಿತಿಗಳು ಇದರ ಬೆನ್ನಿಗಿದ್ದರು.&lt;br /&gt;ಅವಲೋಕನ ಸಂದರ್ಭದಲ್ಲಿ ಕಂಡು ಬಂದ ಪ್ರಮುಖ ಸಂಗತಿಗಳದಲ್ಲಿ ಒಂದು, ಶರಾವತಿ ಕೊಳ್ಳದಲ್ಲಿ ಕನಿಷ್ಟ ಶೇ.೫೦ರಷ್ಟು ನೀರು ಕಡಿಮೆಯಾಗಿದೆ. ಮೂಲಸ್ಥಾನ ಅಂಬುತೀರ್ಥದಲ್ಲಿಯೇ ನೀರಿನ ಸೆಲೆ ಬತ್ತುತ್ತಿದೆ. ನದಿ ಪಾತ್ರದ ಕೆರೆ, ಹಳ್ಳ, ತೊರೆಗಳು ಬತ್ತುತ್ತಿವೆ.&lt;br /&gt;ಇನ್ನೊಂದು, ಏಕಜಾತಿ ನೆಡೆತೋಪುಗಳಿಂದ ಜೀವ ವೈವಿಧ್ಯತೆಗೆ ಧಕ್ಕೆಯಾಗಿ ಒಟ್ಟಾರೆ ನೈಸರ್ಗಿಕ ಕಾಡೇ ಕೊಳ್ಳದಲ್ಲಿ ಅಪರೂಪವಾಗಿದೆ.&lt;br /&gt;ಹೋರಾಟಗಾರರು ಹೇಳುವುದೇನು?&lt;br /&gt;ಅವಲೋಕನದಿಂದ ನದಿ ದಡದ ಜನರಲ್ಲಿ ಖಂಡಿತವಾಗಿಯೂ ಜಾಗೃತಿಯಾಗಿದೆ. ಈ ಬಗ್ಗೆ ಅನುಮಾನ ಬೇಡ. ಇದು ನಿಧಾನ ಪ್ರಗತಿ ಕಾಣುತ್ತಿದೆ ಎನ್ನುತ್ತಾರೆ ಪ್ರೆ.ಟಿ.ಎಸ್. ಹೂವಯ್ಯಗೌಡ.&lt;br /&gt;ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು ಏಕ ಜಾತಿ ನೆಡತೋಪುಗಳನ್ನು ಬೆಳೆಸುವುದಿಲ್ಲ ಎಂದು ಘೋಷಿಸಿದ್ದಾರೆ ಎನ್ನುತ್ತಾರೆ ಅವರು.&lt;br /&gt;ಶರಾವತಿ ಒಡಲಿನಲ್ಲಿರುವ ಅನೇಕ ನಿಜ ಸಂಗತಿಗಳನ್ನು ಇಂದು ನಾವು ಮತ್ತೆ ನೆನಪಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ಕರ್ನಾಟಕ ಮೌನ ಕಣಿವೆ ಪ್ರದೇಶವನ್ನು ಯಥಾಸ್ಥಿಯಲ್ಲಿ ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. &lt;/div&gt;&lt;div&gt;&lt;br /&gt;&lt;strong&gt;&lt;span style="color:#3333ff;"&gt;ಪ್ರವೀಣ್ ಮಾವಿನಸರ&lt;/span&gt;&lt;/strong&gt;&lt;/div&gt;&lt;div&gt;&lt;strong&gt;&lt;span style="color:#3333ff;"&gt;ಚಿತ್ರ: ಆರ್.ಎಸ್. ಹಾಲಸ್ವಾಮಿ&lt;/span&gt;&lt;/strong&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/175618676507441256-7766647532328866515?l=mavinasara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://mavinasara.blogspot.com/feeds/7766647532328866515/comments/default' title='Post Comments'/><link rel='replies' type='text/html' href='http://www.blogger.com/comment.g?blogID=175618676507441256&amp;postID=7766647532328866515' title='2 Comments'/><link rel='edit' type='application/atom+xml' href='http://www.blogger.com/feeds/175618676507441256/posts/default/7766647532328866515'/><link rel='self' type='application/atom+xml' href='http://www.blogger.com/feeds/175618676507441256/posts/default/7766647532328866515'/><link rel='alternate' type='text/html' href='http://mavinasara.blogspot.com/2007/05/blog-post_14.html' title='ಕರ್ನಾಟಕದ ಮೌನ ಕಣಿವೆಯಲ್ಲಿ ಅಲ್ಲೋಲ- ಕಲ್ಲೋಲ'/><author><name>ಪ್ರವೀಣ್ ಮಾವಿನಸರ</name><uri>http://www.blogger.com/profile/13251939120641934507</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_EGz7kNqH9cg/RkjROc5HiuI/AAAAAAAAAAs/N8Dg7ZM4h68/s72-c/KAVLEDUR.JPG' height='72' width='72'/><thr:total>2</thr:total></entry><entry><id>tag:blogger.com,1999:blog-175618676507441256.post-7809188999691040698</id><published>2007-05-09T14:15:00.000-07:00</published><updated>2008-12-09T17:42:58.861-08:00</updated><title type='text'></title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_EGz7kNqH9cg/RkI62M5HirI/AAAAAAAAAAM/cEujamZ8ZRI/s1600-h/FOREST.jpg"&gt;&lt;img style="margin: 0px auto 10px; display: block; text-align: center; cursor: pointer;" src="http://4.bp.blogspot.com/_EGz7kNqH9cg/RkI62M5HirI/AAAAAAAAAAM/cEujamZ8ZRI/s320/FOREST.jpg" alt="" id="BLOGGER_PHOTO_ID_5062673633966000818" border="0" /&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/175618676507441256-7809188999691040698?l=mavinasara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://mavinasara.blogspot.com/feeds/7809188999691040698/comments/default' title='Post Comments'/><link rel='replies' type='text/html' href='http://www.blogger.com/comment.g?blogID=175618676507441256&amp;postID=7809188999691040698' title='2 Comments'/><link rel='edit' type='application/atom+xml' href='http://www.blogger.com/feeds/175618676507441256/posts/default/7809188999691040698'/><link rel='self' type='application/atom+xml' href='http://www.blogger.com/feeds/175618676507441256/posts/default/7809188999691040698'/><link rel='alternate' type='text/html' href='http://mavinasara.blogspot.com/2007/05/blog-post_09.html' title=''/><author><name>ಪ್ರವೀಣ್ ಮಾವಿನಸರ</name><uri>http://www.blogger.com/profile/13251939120641934507</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_EGz7kNqH9cg/RkI62M5HirI/AAAAAAAAAAM/cEujamZ8ZRI/s72-c/FOREST.jpg' height='72' width='72'/><thr:total>2</thr:total></entry><entry><id>tag:blogger.com,1999:blog-175618676507441256.post-3713964177511337868</id><published>2007-05-09T14:04:00.000-07:00</published><updated>2007-05-11T14:52:09.047-07:00</updated><title type='text'>ನಾನು ಕಾಡಿನ ಹುಡುಗ</title><content type='html'>ಇದು ನನ್ನ ಮೊದಲ ಮಾತು. ನನ್ನೂರು ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಒಂದು ಹಳ್ಳಿ. ದಟ್ಟ ಕಾಡಿನ ಕುಗ್ರಾಮ. ಈಗ ದಟ್ಟ ಮುಂದೆ ಕುರುಚಲು ಸೇರಿಕೊಂಡಿದೆ.&lt;br /&gt;ಇದೆಲ್ಲ ಆಗಿದ್ದು ಕಳೆದ ಒಂದು ಒಂದೂವರೆ ದಶಕದಲ್ಲಿ. ಯಾವಾಗ ಕೇರಳಿಗರು ಮನೆ ಮುರುಕ ಶುಂಠಿ ತಂದರೋ ಆಗ ಶುರುವಾಯಿತು ಮಲೆನಾಡಿನ ಕಾಡಿಗೆ ವಕ್ರದಸೆ.&lt;br /&gt;ಇದೊಂದು ನಿದರ್ಶನ ಅಷ್ಟೆ. ಇಂತಹ ಒಂದಲ್ಲ ನೂರಾರು ಬದಲಾವಣೆಗಳು ಮಲೆನಾಡು, ಅಲ್ಲಿನ ಪರಿಸರದ ಮೇಲಾಗಿವೆ.&lt;br /&gt;ಅಲ್ಲಿನ ಒಂದಿಷ್ಟು ಕಟು ವಾಸ್ತವಗಳನ್ನು ಪರಿಚಯಿಸುವುದಷ್ಟೆ ನನ್ನ ಉದ್ದೇಶ. ಅಲ್ಲದೇ ನಾನೊಬ್ಬ ಸಾಹಿತ್ಯದ ವಿದ್ಯಾರ್ಥಿ. ಕತೆ, ಕವನ ಇದ್ದೆ ಇರುತ್ತವೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/175618676507441256-3713964177511337868?l=mavinasara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://mavinasara.blogspot.com/feeds/3713964177511337868/comments/default' title='Post Comments'/><link rel='replies' type='text/html' href='http://www.blogger.com/comment.g?blogID=175618676507441256&amp;postID=3713964177511337868' title='2 Comments'/><link rel='edit' type='application/atom+xml' href='http://www.blogger.com/feeds/175618676507441256/posts/default/3713964177511337868'/><link rel='self' type='application/atom+xml' href='http://www.blogger.com/feeds/175618676507441256/posts/default/3713964177511337868'/><link rel='alternate' type='text/html' href='http://mavinasara.blogspot.com/2007/05/blog-post.html' title='ನಾನು ಕಾಡಿನ ಹುಡುಗ'/><author><name>ಪ್ರವೀಣ್ ಮಾವಿನಸರ</name><uri>http://www.blogger.com/profile/13251939120641934507</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry></feed>
